September 6, 2026
ಗ್ರಾಮಾಂತರ ಸುದ್ದಿ

ನಿರ್ಗತಿಕ ವಯೋ ವೃದ್ದನಿಗೆ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ಆಶ್ರಯ

ವೇಣೂರು: ಕಳೆದ 15 ದಿನಗಳಿಂದ ವೇಣೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಸ್ಥಿಮಿತವಿಲ್ಲದ ವಯೋವೃದ್ಧ ಅಲೆಮಾರಿಯಾಗಿ ತಿರುಗಾಡುತಿದ್ದುದನ್ನು ಕಂಡ ಸ್ಥಳೀಯರು ವೇಣೂರು ಪೋಲೀಸ್ ಠಾಣೆಗೆ ತಿಳಿಸಿ, ಪುನರ್ವಸತಿ ಕಲ್ಪಿಸಿದ‌ ಮಾನವೀಯತೆಯ ಪ್ರಸಂಗ ಬೆಳಕಿಗೆ ಬಂದಿದೆ.
ಈ ಅಸ್ವಸ್ಥ ಉಡುಪಿಯ ಕಾಪುವಿನ ಪರಿಸರದ ರಮೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು.ಬಂಧು ಬಳಗದ ಸಂಬಂಧ ಕಳಚಿ , ಅನಾವಶ್ಯಕ ತೊಂದರೆ ಕೊಡುತ್ತಿದ್ದು ಕ್ರಮೇಣ ಮಾನಸಿಕ ಸ್ಥಿಮಿತ ಕಳೆದು ಊರೂರು ಅಲೆಯುತಿದ್ದು ಕಾಪು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸದ್ಯ ಈ ವ್ಯಕ್ತಿ ವೇಣೂರು ಸಮೀಪದ ಗುಂಡೂರಿ‌ ಗ್ರಾಮದ ಅಂಗಡಿ ಮುಂಗಟ್ಟುಗಳ ಮಧ್ಯೆ ಅನಾಥವಾಗಿ ತಿರುಗಾಡುತ್ತಿದ್ದ ನ್ನು, ಕಂಡ ಸ್ಥಳೀಯರಾದ ಸುಕೇಶ್ ಪೂಜಾರಿ, ಪ್ರವೀಣ್ ಆಚಾರ್ಯ, ಇವರು ವೇಣೂರು ಪೋಲೀಸ್ ಠಾಣೆಗೆ ಸಂಪರ್ಕಿಸಿ ಸಹಾಯಕ್ಕಾಗಿ ವಿನಂತಿಸಿದಂತೆಯೇ, ಇದಕ್ಕೆ ಗುಂಡೂರಿಯ ಶ್ರೀಗುರು ಚೈತನ್ಯವನ್ನು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳರವರು ಪೋಲೀಸರ ಜತೆ ಸಹಕರಿಸಿ ಈ ವ್ಯಕ್ತಿಯ ಬಂಧುಗಳ ಪತ್ತೆ ಹಚ್ಚಿ ಪೋಲೀಸ್ ಠಾಣೆಗೆ ಕರೆಸಿ ಅವರ ಸಮಸ್ಯೆ ಆಲಿಸಿ ಬಂಧುಗಳ ಒಪ್ಪಿಗೆಯಂತೆಯೇ ಸೇವಾಶ್ರಮದಲ್ಲಿ ಎ.3ರಂದು ಪುನರ್ವಸತಿ ಕಲ್ಪಿಸಲಾಯಿತು .
ಪೂಲೀಸರ,ಸ್ಥಳೀಯರ, ಶ್ರೀಗುರು ಚೈತನ್ಯ ಸೇವಾಶ್ರಮದ ಈ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Related posts

ಉಜಿರೆಯ ರಕ್ಷಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಧಾರವಾಹಿಯ ನಟಿ ದೀಪಾ ಕಟ್ಟೆ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಜಗದೀಶ್ ಲಾಯಿಲ, ಸಂಘಟನಾ ಪ್ರಮುಖರಾಗಿ ದೇವರಾಜ್ ಪೂಜಾರಿ

Suddi Udaya

ಮಂಗಳೂರಿನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿ ಸಭೆ

Suddi Udaya

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಗಂಗಾಧರ ಬಳಂಜರವರಿಗೆ ಸೇವಾ ನಿವೃತ್ತಿ

Suddi Udaya

ಉಜಿರೆ : ಶ್ರೀ ಧ. ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

Suddi Udaya

ಕಾಯರ್ತಡ್ಕ: ಭಾರತ್ ಸ್ಟೋರ್ಸ್ ಗೆ ನುಗ್ಗಿದ ಕಳ್ಳರು: ನಗದು ಜೊತೆಗೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿ

Suddi Udaya
error: Content is protected !!