ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶುಶ್ರೂಷ ಮಾಹಿತಿ ಕಾರ್ಯಾಗಾರ: ಜೆಸಿಐ ಪದಾಧಿಕಾರಿಗಳೊಂದಿಗೆ ಕುಟುಂಭೋತ್ಸವ ಆಚರಣೆ, ಬಹುಮಾನ ವಿತರಣೆ

Suddi Udaya

ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು ” ಶುಶ್ರೂಷ ” ಎಂಬ ಕಾರ್ಯಕ್ರಮವನ್ನು ಬೀಟ್ ರಾಕರ್ಸ್ ಡಾನ್ಸ್ ಆಕಾಡೆಮಿಯ ಮಾಲಕರಾದ ಜಿತೇಶ್ ಇವರ ನಿವಾಸದಲ್ಲಿ ಹಮ್ಮಿಕೊಳ್ಳಲಾಯಿತು.

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದುಗಳು, ಹಾಗೂ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ ವಲಯ ತರಬೇತಿದಾರರು ಹಾಗೂ ಬೆಳ್ತಂಗಡಿಯ ಶುಶ್ರೂಷನಾಧಿಕಾರಿ ಶುಭಾಷಿಣಿ ಇವರು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಜೆಸಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್ ಡಿ ಬಳಂಜ ವಹಿಸಿದ್ದರು.

ವೇದಿಕೆಯಲ್ಲಿ ಜಿತೇಶ್ ರವರ ಮಾತೃಶ್ರೀ ರೇವತಿ ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಜೂನಿಯರ್ ಘಟಕದ ನಿರ್ದೇಶಕರಾಗಿರುವ ರಕ್ಷಿತಾ ಶೆಟ್ಟಿ ಹಾಗೂ ಜೆಸಿವಾಣಿಯನ್ನು ಸ್ವಾತಿ ಪ್ರೀತೇಶ್ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ಜೆಸಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಕುಟುಂಬೋತ್ಸವವನ್ನು ಆಚರಿಸಲಾಯಿತು. ಜೂನಿಯರ್ ಜೆಸಿ ವಿಭಾಗದ ನಿರ್ದೇಶಕರಾದ ಸಚಿನ್ ಸಾಲಿಯಾನ್ ಗೇರುಕಟ್ಟೆ ಇವರು ಕಾರ್ಯಕ್ರಮ ನಡೆಸಿಕೊಟ್ಟರು.

ಮಂಜುಶ್ರೀ ಜೆಸಿಐ ಘಟಕದಿಂದ ಕುಟುಂಬೋತ್ಸವವನ್ನು ಆಯೋಜಿಸಿದ ಜಿತೇಶ್ ಇವರ ಮಾತೃಶ್ರೀ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಅನುದೀಪ್ ಜೈನ್ ಇವರು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶಂಕರ್ ರಾವ್, ಮಹಿಳಾ ಜೆಸಿ ಸಂಯೋಜಕರಾದ ಶ್ರುತಿರಂಜಿತ್, ಜೆಜೆಸಿ ಘಟಕದ ಅಧ್ಯಕ್ಷ ಸಮನ್ವತ್ ಕುಮಾರ್, ಘಟಕದ ಪೂರ್ವ ಅಧ್ಯಕ್ಷರು, ಮಹಿಳಾ ಜೆಸಿಯ ಪೂರ್ವ ಅಧ್ಯಕ್ಷರುಗಳು, ಘಟಕದ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಜೆಜೆಸಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!