24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಎ.13-22: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಎ.25 : ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ

ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಎ.13ರಿಂದ ಎ.22 ರವರೆಗೆ ನಡೆಯಲಿದ್ದು ಎ.25ರಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.

ಎ.13 ರಂದು ತೋರಣ ಮೂಹೂರ್ತ, ಏಕಾದಶ ರುದ್ರಾಭಿಷೇಕ, ನವಕ ಪ್ರಧಾನ, ಕಂಕಣಬಂಧ, ಬೆಳಿಗ್ಗೆ 11.30ಕ್ಕೆ ಧ್ವಜಾರೋಹಣ ನಡೆಯಲಿದೆ.

ಎ.14 ದೀಪದ ಬಲಿ, ಏಕಾದಶ ರುದ್ರಾಭಿಷೇಕ ಸಂಜೆ ಗಂಟೆ 7.00ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯಾರ್ಪಣಂ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಎ.15 ಬೆಳಿಗ್ಗೆ 9.00 ರಿಂದ ಶತರುದ್ರಾಭಿಷೇಕ, ಎ.16 ಬೆಳಿಗ್ಗೆ ಗಣಪತಿ ದೇವರಿಗೆ 12 ತೆಂಗಿನಕಾಯಿ ಗಣಯಾಗ, ಅಪರಾಹ್ನ ಗಂಟೆ 3.00 ರಿಂದ ಹಸಿರುವಾಣಿ ಹೊರೆಕಾಣಿಕೆ, ರಾತ್ರಿ 7.00ರಿಂದ ತಾಳಮದ್ದಳೆ ‘ಮೀನಾಕ್ಷಿ ಕಲ್ಯಾಣ’ ನಡೆಯಲಿದೆ.

ಎ.17 ರಂದು ಬೆಳಿಗ್ಗೆ ಶ್ರೀ ಜನಾರ್ಧನ ದೇವರಿಗೆ ವಿಷ್ಣು ಸಹಸ್ರ ನಾಮಾರ್ಚನೆ, ಸಂಜೆ ದೀಪಾರಾಧನೆ, ರಾತ್ರಿ ರಕ್ತೇಶ್ವರಿ ದೈವದ ನೇಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ ತಾಳಮದ್ದಳೆ ಶ್ರೀ ರಾಮ ಕಾರುಣ್ಯ ನಡೆಯಲಿದೆ.

ಎ.18 ಬೆಳಿಗ್ಗೆ ನಾಗದೇವರಿಗೆ ಆಶ್ಲೇಷ ಬಲಿ, ಪವಮಾನ ಅಭಿಷೇಕ, ಸಂಜೆ ವೇಣೂರು ತುಳುನಾಡ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.

ಎ.19 ರಂದು ಬೆಳಿಗ್ಗೆ ಶ್ರೀ ಭದ್ರಕಾಳಿ ದೇವಿಗೆ ಸಪ್ತಶತಿ ಪಾರಾಯಣ, ಬೆಳಿಗ್ಗೆ ಗಂಟೆ 9.00 ರಿಂದ 12ರತನಕ ವಿವಿಧ ಭಜನಾ ತಮಡಗಳಿಂದ ಭಜನೋತ್ಸವ ಕಾರ್ಯಕ್ರಮ, ರಾಥ್ರಿ ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ಹಾಗೂ ರಾತ್ರಿ 9.30 ರಿಂದ ಪ್ರಸಿದ್ಧ ಕಲಾವಿದರಿಮದ ಯಕ್ಷಗಾನ ಗಾನ ವೈಭವ, ಶಿವಾಂಜಲಿ ಡ್ಯಾನ್ಸ್ ಇನ್ ಸ್ಟಿಟ್ಯೂಟ್ ವೇಣೂರು ಇವರಿಂದ ಹಾಸ್ಯ, ನಾಟ್ಯ, ವೈಭವ ನಡೆಯಲಿದೆ.

ಎ.20 ರಂದು ಬೆಳಿಗ್ಗೆ 9.00 ರಿಂದ ಸಾರ್ವಜನಿಕ ಶನಿಪೂಜೆ, ಎ.21 ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಚೂಣೋತ್ಸವ, ರಾತ್ರಿ 8.30 ರಿಂದ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ, 9.00ರಿಂದ ಉತ್ಸವ, ಮಹಾರಥೋತ್ಸವ, ಅವಕೃತ ಕಟ್ಟೆಪೂಜೆ, ಬಾಕಿಮಾರು ಗದ್ದೆಗೆ ಸವಾರಿ, ದೈವ-ದೇವಚರ ಭೇಟಿ, ಅವಭೃತ ಸ್ನಾನ, ಧ್ವಜಾರೋಹಣ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ ನಡೆಯಲಿದೆ.

ಎ.22 ರಂದು ಏಕಾದಶ ರುದ್ರಾಭಿಷೇಕ, ಸಂಪ್ರೋಕ್ಷಣೆ, ಸಂತರ್ಪಣೆ, ಮಹಾಮಂತ್ರಾಕ್ಷತೆ ರಾತ್ರಿ 7.00 ರಿಂದ ಅಂಗಣ ಪಂಜುರ್ಲಿ ದೈವದ ನೇಮ ನಡೆಯಲಿದೆ.

Related posts

ನಂದಿ ರಥ ಯಾತ್ರೆಗೆ ಗುರುವಾಯನಕೆರೆಯಲ್ಲಿ ಸ್ವಾಗತ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣಾ ತರಬೇತಿ

Suddi Udaya

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

Suddi Udaya

ಪಡಂಗಡಿ : ಪೊಯ್ಯೆಗುಡ್ಡೆ ನಿವಾಸಿ ಶ್ರೀಮತಿ ಕಮಲ ನಿಧನ

Suddi Udaya

ಬಳಂಜ ಎಲ್.ಕೆ.ಜಿ ವಿದ್ಯಾರ್ಥಿಗಳಿಗೆ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ

Suddi Udaya

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಐದನೇ ವರ್ಷದ ದೀಪಾವಳಿ ದೋಸೆ ಹಬ್ಬ

Suddi Udaya
error: Content is protected !!