26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಎಂ.ಎಸ್. ಪ್ರಕಾಶ್ ಎಂಬವರ ತೋಟಕ್ಕೆ ಎ.6ರಂದು ತಡರಾತ್ರಿ ಒಂಟಿ ಸಲಗ ಪ್ರವೇಶಿಸಿ ಕೃಷಿಹಾನಿ ಉಂಟುಮಾಡಿದೆ.


ಸಲಗವು ಸುಮಾರು 40ಕ್ಕಿಂತ ಅಧಿಕ ಬಾಳೆ ಗಿಡ 5 ಅಡಕೆ ಮರಗಳನ್ನು ಧ್ವಂಸಗೊಳಿಸಿದೆ.
ಕಳೆದ ಸುಮಾರು ಎರಡು ತಿಂಗಳ ಹಿಂದೆ ಇದೇ ತೋಟಕ್ಕೆ ಪ್ರವೇಶಿಸಿದ್ದ ಕಾಡಾನೆ ಆಗ ಈಚಲ ಮರವನ್ನು ಮುರಿದು ಹಾಕಿತ್ತು. ಮನೆಯವರು ಅದನ್ನು ಹಾಗೆ ಬಿಟ್ಟಿದ್ದರು. ಈ ಈಚಲ ಮರವನ್ನು ಆನೆ ಶನಿವಾರ ಸಂಪೂರ್ಣ ಪುಡಿಗಟ್ಟಿದೆ.
ತಿಂಗಳ ಹಿಂದೆ ಕಾಡಾನೆಗಳು ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಕಲ್ಮಂಜ,ಬೆಳಾಲು, ಗೇರುಕಟ್ಟೆ ಮೊದಲಾದ ಕಡೆ ಸಾಕಷ್ಟು ದಾಂಧಲೆ ನಡೆಸಿ ಉಪ್ಪಿನಂಗಡಿ ಭಾಗದಲ್ಲಿಯು ಪ್ರತ್ಯಕ್ಷವಾಗಿದ್ದು, ಇದೀಗ ಮತ್ತೆ ಕಾಡಾನೆ ಉಪಟಳ ಈ ಭಾಗಗಳಲ್ಲಿ ಕಾಣಿಸಿಕೊಂಡಿದೆ.

Related posts

ಓಡಲ ಶಿವ-ಪಾರ್ವತಿ ಮಹಿಳಾ ಭಜನಾ ತಂಡದಿಂದ ನಿವೃತ್ತ ಶಿಕ್ಷಕಿ ಸೀತಮ್ಮ ರವರಿಗೆ ಗುರುವಂದನೆ ಕಾರ್ಯಕ್ರಮ

Suddi Udaya

ನಿಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಗೋವಿಂದೂರು ಗುಡ್ಡಕ್ಕೆ ಬಿದ್ದ ಬೆಂಕಿ : ಗ್ರಾ.ಪಂ ಸದಸ್ಯ ಲತೀಫ್‌ರ ಸಮಯ ಪ್ರಜ್ಞೆ

Suddi Udaya

ಮಚ್ಚಿನ :ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ರೂ.4 ಕೋಟಿ ಅನುದಾನ ಮಂಜೂರು

Suddi Udaya

ಬರೆಂಗಾಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಉಪಕೇಂದ್ರ ಆರಂಭ

Suddi Udaya
error: Content is protected !!