22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

ಬೆಳ್ತಂಗಡಿ: ಕಲ್ಮಂಜ ಗ್ರಾಮದ ಬೆರ್ಕೆ ಎಂಬಲ್ಲಿ ಎಂ.ಎಸ್. ಪ್ರಕಾಶ್ ಎಂಬವರ ತೋಟಕ್ಕೆ ಎ.6ರಂದು ತಡರಾತ್ರಿ ಒಂಟಿ ಸಲಗ ಪ್ರವೇಶಿಸಿ ಕೃಷಿಹಾನಿ ಉಂಟುಮಾಡಿದೆ.


ಸಲಗವು ಸುಮಾರು 40ಕ್ಕಿಂತ ಅಧಿಕ ಬಾಳೆ ಗಿಡ 5 ಅಡಕೆ ಮರಗಳನ್ನು ಧ್ವಂಸಗೊಳಿಸಿದೆ.
ಕಳೆದ ಸುಮಾರು ಎರಡು ತಿಂಗಳ ಹಿಂದೆ ಇದೇ ತೋಟಕ್ಕೆ ಪ್ರವೇಶಿಸಿದ್ದ ಕಾಡಾನೆ ಆಗ ಈಚಲ ಮರವನ್ನು ಮುರಿದು ಹಾಕಿತ್ತು. ಮನೆಯವರು ಅದನ್ನು ಹಾಗೆ ಬಿಟ್ಟಿದ್ದರು. ಈ ಈಚಲ ಮರವನ್ನು ಆನೆ ಶನಿವಾರ ಸಂಪೂರ್ಣ ಪುಡಿಗಟ್ಟಿದೆ.
ತಿಂಗಳ ಹಿಂದೆ ಕಾಡಾನೆಗಳು ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಕಲ್ಮಂಜ,ಬೆಳಾಲು, ಗೇರುಕಟ್ಟೆ ಮೊದಲಾದ ಕಡೆ ಸಾಕಷ್ಟು ದಾಂಧಲೆ ನಡೆಸಿ ಉಪ್ಪಿನಂಗಡಿ ಭಾಗದಲ್ಲಿಯು ಪ್ರತ್ಯಕ್ಷವಾಗಿದ್ದು, ಇದೀಗ ಮತ್ತೆ ಕಾಡಾನೆ ಉಪಟಳ ಈ ಭಾಗಗಳಲ್ಲಿ ಕಾಣಿಸಿಕೊಂಡಿದೆ.

Related posts

ಶ್ರೀ. ಕ್ಷೆ. ಧ. ಗ್ರಾ ಯೋಜನೆಯ ಬಜಿರೆ ಒಕ್ಕೂಟದ ಪದಗ್ರಹಣ ಹಾಗೂ 19ನೇ ವರ್ಷದ ಶನೇಶ್ವರ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗುಂಡೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಕೇಳ್ಕರೇಶ್ವರ ಬಸ್ಸು ತಂಗುದಾಣ ಉದ್ಘಾಟನೆ

Suddi Udaya

ಮುಂಡಾಜೆ ಹಾ.ಉ. ಸ. ಸಂಘದ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆ : ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ.ಅವಿರೋಧ ಆಯ್ಕೆ

Suddi Udaya

ವಾಣಿ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿಯ ಕಲ್ಲೇರಿ ಶಾಖೆಯಲ್ಲಿ ಪ್ರಥಮ ವರ್ಷಾಚರಣೆಯ ಪ್ರಯುಕ್ತ ಗ್ರಾಹಕರ ಸಮ್ಮಿಲನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸುರೇಶ್ ಪೂಜಾರಿ ಜೈಮಾತ ನಾಲ್ಕೂರು ಬಿಜೆಪಿ ಸೇರ್ಪಡೆ

Suddi Udaya

ಬೆಳ್ತಂಗಡಿ ಮೀಡಿಯಾ ಕ್ಲಬ್ ನ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ

Suddi Udaya
error: Content is protected !!