ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

ಬಂದಾರು : ಸರಕಾರಿ ಶಾಲೆಯ ಅಡಿಕೆ ತೋಟದಲ್ಲಿ ಒಂದೇ ವರ್ಷದ ಅಡಿಕೆ ಸಸಿಯೊಂದರಲ್ಲಿ ಕಾಂಡದ ತುದಿಯ ಗರಿಗಳ ಮಧ್ಯ ಭಾಗದಲ್ಲಿ ಚೊಚ್ಚಲ ಹಿಂಗಾರ ಮೂಡಿದ ಪ್ರಕೃತಿ ವೈಚಿತ್ರ್ಯವೊಂದು ಬಂದಾರು ಬಳಿ ಕಂಡು ಬಂದಿದೆ.

ಹೌದು, ಬೆಳ್ತಂಗಡಿ ತಾಲೂಕು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಒಂದು ವರ್ಷದ ಮಂಗಳ ತಳಿಯ ಅಡಿಕೆ ತೋಟದ ಅಡಿಕೆ ಸಸಿಯೊಂದರಲ್ಲಿ ಗರಿ ಮೂಡುವ ಕಾಂಡದ ತುದಿಯಲ್ಲಿ ಹೊಚ್ಚ ಹೊಸ ಹಿಂಗಾರವೇ ಚಿಗುರಿ ಅರಳಿದೆ. ಇದೀಗ ಕಡಲೆ ಕಾಳಿನ ಗಾತ್ರದಲ್ಲಿ ಎಳೆ ಅಡಿಕೆ ಕಾಯಿಯೂ ಬೆಳೆಯುತ್ತಿದೆ.ನೆಟ್ಟ ಒಂದೇ ವರ್ಷಕ್ಕೆ ಅಡಿಕೆ ಸಸಿಯಲ್ಲಿ ಕಂಡು ಬಂದ ಈ ಪ್ರಕೃತಿ ವೈಚಿತ್ರ್ಯದ ಬಗ್ಗೆ ಕುತೂಹಲ ಮೂಡಿದ್ದು ಹಿಂಗಾರದ ಮುಂದಿನ ಬೆಳವಣಿಗೆ ಬಗ್ಗೆ ಕಾತರದಿಂದ ಕಾಯುವಂತಾಗಿದೆ.

ಅಚುಶ್ರೀ ಬಾಂಗೇರು.

Related posts

ಕಣಿಯೂರು: ಟೀಂ ನವಕೇಸರಿ ಮಲೆಂಗಲ್ಲು ಮತ್ತು ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಉಜಿರೆ: ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ‘ಯಶೋವನ’ ಲೋಕಾರ್ಪಣೆ

Suddi Udaya

ಭಾರತ್ ಬೀಡಿ ಕಂಪೆನಿ ಉಳಿಸಿ ಭಾರತ್ ಬೀಡಿ ಕಂಪೆನಿ ಎದುರು ಸಿಐಟಿಯು ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಯಕ್ರಮ

Suddi Udaya

ಇಳಂತಿಲ: ಅಮಲು ಸೇವನೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ಟೀಚರ್ಸ್ ಬ್ಯಾಂಕ್ ಉಡುಪಿಗೆ ರಾಷ್ಟ್ರೀಯ ಪ್ರಶಸ್ತಿ

Suddi Udaya
error: Content is protected !!