July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಂದಾರು : ಒಂದೇ ವರ್ಷದ ಅಡಿಕೆ ಸಸಿಯಲ್ಲಿ ಮೂಡಿದ ಚೊಚ್ಚಲ ಹಿಂಗಾರ; ಶಾಲಾ ತೋಟದಲ್ಲಿ ಹೀಗೊಂದು ಪ್ರಕೃತಿ ವೈಚಿತ್ರ್ಯ

ಬಂದಾರು : ಸರಕಾರಿ ಶಾಲೆಯ ಅಡಿಕೆ ತೋಟದಲ್ಲಿ ಒಂದೇ ವರ್ಷದ ಅಡಿಕೆ ಸಸಿಯೊಂದರಲ್ಲಿ ಕಾಂಡದ ತುದಿಯ ಗರಿಗಳ ಮಧ್ಯ ಭಾಗದಲ್ಲಿ ಚೊಚ್ಚಲ ಹಿಂಗಾರ ಮೂಡಿದ ಪ್ರಕೃತಿ ವೈಚಿತ್ರ್ಯವೊಂದು ಬಂದಾರು ಬಳಿ ಕಂಡು ಬಂದಿದೆ.

ಹೌದು, ಬೆಳ್ತಂಗಡಿ ತಾಲೂಕು ಬಂದಾರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಒಂದು ವರ್ಷದ ಮಂಗಳ ತಳಿಯ ಅಡಿಕೆ ತೋಟದ ಅಡಿಕೆ ಸಸಿಯೊಂದರಲ್ಲಿ ಗರಿ ಮೂಡುವ ಕಾಂಡದ ತುದಿಯಲ್ಲಿ ಹೊಚ್ಚ ಹೊಸ ಹಿಂಗಾರವೇ ಚಿಗುರಿ ಅರಳಿದೆ. ಇದೀಗ ಕಡಲೆ ಕಾಳಿನ ಗಾತ್ರದಲ್ಲಿ ಎಳೆ ಅಡಿಕೆ ಕಾಯಿಯೂ ಬೆಳೆಯುತ್ತಿದೆ.ನೆಟ್ಟ ಒಂದೇ ವರ್ಷಕ್ಕೆ ಅಡಿಕೆ ಸಸಿಯಲ್ಲಿ ಕಂಡು ಬಂದ ಈ ಪ್ರಕೃತಿ ವೈಚಿತ್ರ್ಯದ ಬಗ್ಗೆ ಕುತೂಹಲ ಮೂಡಿದ್ದು ಹಿಂಗಾರದ ಮುಂದಿನ ಬೆಳವಣಿಗೆ ಬಗ್ಗೆ ಕಾತರದಿಂದ ಕಾಯುವಂತಾಗಿದೆ.

ಅಚುಶ್ರೀ ಬಾಂಗೇರು.

Related posts

ನಾಳೆ ಬೆಳ್ತಂಗಡಿಗೆ ಜಿಲ್ಲಾಧಿಕಾರಿ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಣ್ಣೀರುಪಂತ ವಲಯದ ಭಜನಾ ಮಂಡಳಿಯ ಸಭೆ

Suddi Udaya

ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ಕುಮಾರಧಾರದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಪನ್ಯಾಸಮಾಲೆ-5 ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya
error: Content is protected !!