24.4 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜೆ

:

ಬೆಳ್ತಂಗಡಿ : ಪುರುಷರ ಭಕ್ತರ ಸಮಿತಿ ಕರ್ಂಬಲೆಕ್ಕಿ ಸಾವ್ಯ ಇದರ ರಾಶಿ ಪೂಜೆ ಇತ್ತೀಚೆಗೆ ಕರ್ಂಬಲೆಕ್ಕಿ ಎಂಬಲ್ಲಿ ಜರಗಿತು.

ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿ ಅತೀ ಭಕ್ತಿ ಭಾವದಿಂದ ಸುಗ್ಗಿ ತಿಂಗಳ ಹುಣ್ಣಿಮೆಯ ಸಂದರ್ಭದಲ್ಲಿ ಪುರುಷ ಕಟ್ಟುವುದು ಆಚರಿಸಲ್ಪಡುವುದಾಗಿದ್ದು ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದು ಮೂರು ಅಥವಾ ಐದು ದಿವಸ ಕದ್ರಿ ದೇವರ ಹೆಸರಿನಲ್ಲಿ ದೇವರು ಸಹಿತ ವಿವಿಧ ವೇಷಗಳೊಂದಿಗೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಹರಕೆ-ಕಾಣಿಕೆ ಸ್ವೀಕರಿಸಿ ಸುಮಾರು 30ರಿಂದ 75 ಮಂದಿಯ ತಂಡ ದಿಮಿಸೋಲೆ ಹಾಕುತ್ತಾ ಬಹು ವಿಜೃಂಭಣೆ ಕಟ್ಟು ಕಟ್ಟಲೆಯಂತೆ ನಡೆದು ಬಳಿಕ ದಿನ ನಿಗದಿಗೊಳಿಸಿ ರಾಶಿ ಪೂಜೆ ಮಾಡಿ ಪ್ರಸಾದ ಹಂಚುವ ಕಾರ್‍ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ. ಸದಾಶಿವ ಹೆಗ್ಡೆ , ವಸಂತ ಪಡೀಲ್, ಅಮ್ಮಿ ಪೂಜಾರಿ, ಸಂದೀಪ್ ಬೀಜದಡಿ, ಸುಂದರ ಬಂಗೇರ, ದಿನೇಶ್ ಕೋಟ್ಯಾನ್, ಪ್ರಶಾಂತ್ ಮಲ್ಲರಡ್ಡ, ಶಶಿಧರ ಆಚಾರ್ಯ, ಮತ್ತಿತರರು ರಾಶಿ ಪೂಜಾ ವಿಧಿ ನಡೆಸಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಿದರು.

Related posts

ನ.3: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ “ಬಂಟೆರೆ ತುಡರ್ ಪರ್ಬ”

Suddi Udaya

ಅಯೋಧ್ಯೆ ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ: ಬಂದಾರು ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಾಮತಾರಕ ಮಂತ್ರ ಜಪ, ಭಜನೆ

Suddi Udaya

ಸಿ.ಎ ಪರೀಕ್ಷೆಯಲ್ಲಿ ನಾರಾವಿಯ ಕು.ಸಂಗೀತಾ ಜಿ. ಹೆಗ್ಡೆ ತೇರ್ಗಡೆ

Suddi Udaya

ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ಸಂಪನ್ನ

Suddi Udaya

ಶಿಬಾಜೆ ಸ.ಕಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಸೌಜನ್ಯ ಕೊಲೆ ಪ್ರಕರಣ: ಕಾನತ್ತೂರು ಕ್ಷೇತ್ರದಲ್ಲಿ ಪ್ರಮಾಣ ಪೂರೈಸಿದ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ್ ಜೈನ್

Suddi Udaya
error: Content is protected !!