September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜೆ

:

ಬೆಳ್ತಂಗಡಿ : ಪುರುಷರ ಭಕ್ತರ ಸಮಿತಿ ಕರ್ಂಬಲೆಕ್ಕಿ ಸಾವ್ಯ ಇದರ ರಾಶಿ ಪೂಜೆ ಇತ್ತೀಚೆಗೆ ಕರ್ಂಬಲೆಕ್ಕಿ ಎಂಬಲ್ಲಿ ಜರಗಿತು.

ಪ್ರಾಚೀನ ಕಾಲದಿಂದ ತುಳುನಾಡಿನಲ್ಲಿ ಅತೀ ಭಕ್ತಿ ಭಾವದಿಂದ ಸುಗ್ಗಿ ತಿಂಗಳ ಹುಣ್ಣಿಮೆಯ ಸಂದರ್ಭದಲ್ಲಿ ಪುರುಷ ಕಟ್ಟುವುದು ಆಚರಿಸಲ್ಪಡುವುದಾಗಿದ್ದು ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿದ್ದು ಮೂರು ಅಥವಾ ಐದು ದಿವಸ ಕದ್ರಿ ದೇವರ ಹೆಸರಿನಲ್ಲಿ ದೇವರು ಸಹಿತ ವಿವಿಧ ವೇಷಗಳೊಂದಿಗೆ ಗ್ರಾಮದ ಮನೆ ಮನೆಗಳಿಗೆ ತೆರಳಿ ಹರಕೆ-ಕಾಣಿಕೆ ಸ್ವೀಕರಿಸಿ ಸುಮಾರು 30ರಿಂದ 75 ಮಂದಿಯ ತಂಡ ದಿಮಿಸೋಲೆ ಹಾಕುತ್ತಾ ಬಹು ವಿಜೃಂಭಣೆ ಕಟ್ಟು ಕಟ್ಟಲೆಯಂತೆ ನಡೆದು ಬಳಿಕ ದಿನ ನಿಗದಿಗೊಳಿಸಿ ರಾಶಿ ಪೂಜೆ ಮಾಡಿ ಪ್ರಸಾದ ಹಂಚುವ ಕಾರ್‍ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೆ. ಸದಾಶಿವ ಹೆಗ್ಡೆ , ವಸಂತ ಪಡೀಲ್, ಅಮ್ಮಿ ಪೂಜಾರಿ, ಸಂದೀಪ್ ಬೀಜದಡಿ, ಸುಂದರ ಬಂಗೇರ, ದಿನೇಶ್ ಕೋಟ್ಯಾನ್, ಪ್ರಶಾಂತ್ ಮಲ್ಲರಡ್ಡ, ಶಶಿಧರ ಆಚಾರ್ಯ, ಮತ್ತಿತರರು ರಾಶಿ ಪೂಜಾ ವಿಧಿ ನಡೆಸಿ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿ ಶ್ರೀದೇವರ ಗಂಧ ಪ್ರಸಾದ ಸ್ವೀಕರಿಸಿದರು.

Related posts

ಕಣಿಯೂರು ವಲಯದ ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಕಲ್ಮಂಜ : ಕೃಷಿಕ ದೇಜಪ್ಪ ಗೌಡ ನಿಧನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಮಾಜಿ ಸಿ.ಎಂ ಯಡಿಯೂರಪ್ಪ

Suddi Udaya

ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಬೆಳ್ತಂಗಡಿ ಶಾಖೆಯ ಉದ್ಘಾಟನೆ ಸಹಕಾರಿ ಕ್ಷೇತ್ರದಿಂದ ನಾಡಿನ ಅಭಿವೃದ್ಧಿ:ಡಾ.ಧರ್ಮಪಾಲನಾಥ ಸ್ವಾಮೀಜಿ : ಸಂಸ್ಥೆಗಳು ಬೆಳೆದಂತೆ ಆ ಪ್ರದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ: ರಂಜನ್ ಜಿ ಗೌಡ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ: ಕನ್ಯಾಡಿಯ ಕೆ.ವಿ ಸ್ಟೋರ್ಸ್ ನಲ್ಲಿ ಸಿಹಿ ವಿತರಣೆ

Suddi Udaya

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಮತ್ತು ಸುದ್ದಿ ಉದಯ ವಾರಪತ್ರಿಕೆಯಿಂದ “ಸ್ವಾತಂತ್ರೋತ್ಸವ” ಆಚರಣೆ

Suddi Udaya
error: Content is protected !!