ಮದ್ದಡ್ಕ ಮಸೀದಿ ಬಳಿ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಕಾರು : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕುವೆಟ್ಟು : ಇಲ್ಲಿಯ ಮದ್ದಡ್ಕ ಮಸೀದಿ ಬಳಿ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಎ.10ರಂದು ನಡೆದಿದೆ.

ಕುವೆಟ್ಟು ನಿವಾಸಿ ಮಹಮ್ಮದ್‌ (63) ಎಂಬವರ ದೂರಿನಂತೆ, ಎ.10 ರಂದು ಸಂಜೆ, ಮಹಮ್ಮದ್ ರವರ ಬಾಬ್ತು KA 70-5972 ನೇ ಆಟೋ ರಿಕ್ಷಾದಲ್ಲಿ ಸಹ ಪ್ರಯಾಣಿಕರನ್ನಾಗಿ, ಸಲೀಂ ಹಾಗೂ ಅವರ ಮಕ್ಕಳಾದ ಮೊಹಮ್ಮದ್‌ ಶಯಾನ್‌(8), ರಿಫ್ನಾ (6) ಎಂಬವರನ್ನು ಕುಳ್ಳಿರಿಸಿಕೊಂಡು, ಮದ್ದಡ್ಕ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ, ಕುವೆಟ್ಟು ಗ್ರಾಮದ ಮದ್ದಡ್ಕ ಮಸೀದಿ ಬಳಿ ತಲುಪುತ್ತಿದ್ದಂತೆ, ಮಹಮ್ಮದ್ ವಿರುದ್ದ ದಿಕ್ಕಿನಿಂದ KA 18 Z 3143 ನೇ ಕಾರನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿ, ಮಹಮ್ಮದ್ ರವರ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನ ಜಖಂಗೊಂಡು ಮಹಮ್ಮದ್, ಸಲೀಂರವರಿಗೆ, ಮಗು ಮೊಹಮ್ಮದ್‌ ಶಯಾನ್‌ ರವರುಗಳಿಗೆ ಗಾಯಗಳಾಗಿರುತ್ತದೆ.

ಗಾಯಾಳುಗಳು ಗುರುವಾಯನಕೆರೆ ಆಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿ, ಈ ಪೈಕಿ ಗಾಯಾಳು ಮೊಹಮ್ಮದ್‌ ಶಯಾನ್‌ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 42/2024 ಕಲಂ: 279,337 ಭಾ.ದಂ.ಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Comment

error: Content is protected !!