ಮೇ 22: ಎಕ್ಸೆಲ್ ಅಕ್ಷರೋತ್ಸವ; ರಾಜ್ಯಮಟ್ಟದ ಕವಿಗೋಷ್ಠಿಗೆ ಆಹ್ವಾನ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ‘ಅಕ್ಷರೋತ್ಸವ’ ಸಾಹಿತ್ಯ ಸಮ್ಮೇಳನ ಮೇ 22 ರಂದು ನಡೆಯಲಿದ್ದು, ಆಯ್ದ ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡುವ “ಕವನ ವಾಚನ ಗಾಯನ -ನೃತ್ಯ ಕುಂಚ ಕಾರ್‍ಯಕ್ರಮ ನಡೆಯಲಿದೆ.

ಆಯ್ಕೆಯಾದ ಕವಿಗಳಿಗೆ ಸ್ಮರಣಿಕೆ ಪ್ರಮಾಣಪತ್ರ ಗ್ರಂಥ ಗೌರವ ನೀಡುವುದರೊಂದಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಳಿಗೆ ಶಾಂತಿರಾಜ್ ಜೈನ್ ಕ್ಯಾಂಪಸ್ ಮೆನೇಜರ್ (9900626441), ಕನ್ನಡ ಉಪನ್ಯಾಸಕರಾದ ರಂಜಿತ್ (7204208355) ಹಾಗೂ ಮುನೀರ್ (7022559969) ಈ ನಂಬರಿಗೆ ಕರೆ ಮಾಡಿ ವಿಚಾರಿಸಬಹುದೆಂದು ಎಕ್ಸೆಲ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತ ಕವಿಗಳು ತಮ್ಮ ಕವಿತೆಗಳನ್ನು ಕಳುಹಿಸಬೇಕಾದ ವಿಳಾಸ: ಅಧ್ಯಕ್ಷರು, ಆಡಳಿತ ಮಂಡಳಿ, ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿದ್ಯಾಸಾಗರ ಕ್ಯಾಂಪಸ್ ಗುರುವಾಯನಕೆರೆ, ಕುವೆಟ್ಟು ಗ್ರಾಮ, .ಬೆಳ್ತಂಗಡಿ ದ.ಕ. -574217, ಇಲ್ಲವೇ ಇಮೇಲ್: [email protected] ವಿಳಾಸಕ್ಕೆ ಕವಿತೆಗಳನ್ನು ಕಳುಹಿಸಕೊಡಬಹುದು. ಕವರಿನ ಮೇಲೆ ಅಕ್ಷರೋತ್ಸವ-2024 ಎಂದು ಬರೆದು ಮೇ 10ರ ಒಳಗಾಗಿ ತಲುಪುವಂತೆ ತಮ್ಮ ಕವನಗಳನ್ನು ಈ ಮೇಲಿನ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

Leave a Comment

error: Content is protected !!