ಚಾರ್ಮಾಡಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಚಾರ್ಮಾಡಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆ ಎ.೨೬ರಂದು ನಡೆಯಲಿರುವ ಮತದಾನಕ್ಕಾಗಿ ಚಾರ್ಮಾಡಿ ಮಾದರಿ ಮತಗಟ್ಟೆ ೨೪ ರಾಜೀವ ಗಾಂಧಿ ಸೇವಾ ಕೇಂದ್ರದ ಮತಗಟ್ಟೆಗೆ ಇಂದು ಆಗಮಿಸಿದ ಮತಗಟ್ಟೆ ಅಧಿಕಾರಿಗಳನ್ನು ಬಿ.ಎಲ್.ಒ ಮತ್ತು ಪಂಚಾಯತು ಸಿಬ್ಬಂದಿಗಳು ತುಳುನಾಡ ಸಾಂಪ್ರಾದಾಯದಂತೆ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.

ಮತಗಟ್ಟೆಯಲ್ಲಿ ಯಶಸ್ವಿಯಾಗಿ ಮತದಾನ ನಡೆಯಲಿ ಎಂದು ಹಾರೈಕೆಯೊಂದಿಗೆ, ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಗಮಿಸಿದಾಗ ಮತಗಟ್ಟೆಯಲ್ಲಿ ದೀಪಬೆಳಗಿಸಿ ಬಳಿಕ ಕಳಸೆಯಲ್ಲಿ ತೆಂಗಿನ ಹಿಂಗಾರ ಅರಳಿಸಿ

ಸ್ವಾಗತಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣೆಗೆ ಮತಗಟ್ಟೆಗೆ ಆಗಮಿಸುವ ಅಧಿಕಾರಿಗಳಿಗೆ ಈ ರೀತಿಯ ಸ್ವಾಗತ ದೊರೆತಿರುವುದು ಇದು ಪ್ರಥಮವಾಗಿದೆ. ಇದನ್ನು ಚಾರ್ಮಾಡಿಯ ಬಿಎಲ್‌ಒ ಮತ್ತು ಪಂಚಾಯತು ಸಿಬ್ಬಂದಿಗಳು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a Comment

error: Content is protected !!