July 23, 2026
ಚುನಾವಣೆ

ಚಾರ್ಮಾಡಿ ಮತಗಟ್ಟೆಗೆ ಆಗಮಿಸಿದ ಅಧಿಕಾರಿಗಳಿಗೆ ಪೂರ್ಣಕುಂಭದ ಸ್ವಾಗತ

ಚಾರ್ಮಾಡಿ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಳೆ ಎ.೨೬ರಂದು ನಡೆಯಲಿರುವ ಮತದಾನಕ್ಕಾಗಿ ಚಾರ್ಮಾಡಿ ಮಾದರಿ ಮತಗಟ್ಟೆ ೨೪ ರಾಜೀವ ಗಾಂಧಿ ಸೇವಾ ಕೇಂದ್ರದ ಮತಗಟ್ಟೆಗೆ ಇಂದು ಆಗಮಿಸಿದ ಮತಗಟ್ಟೆ ಅಧಿಕಾರಿಗಳನ್ನು ಬಿ.ಎಲ್.ಒ ಮತ್ತು ಪಂಚಾಯತು ಸಿಬ್ಬಂದಿಗಳು ತುಳುನಾಡ ಸಾಂಪ್ರಾದಾಯದಂತೆ ಪೂರ್ಣಕುಂಬದೊಂದಿಗೆ ಸ್ವಾಗತಿಸಿದರು.

ಮತಗಟ್ಟೆಯಲ್ಲಿ ಯಶಸ್ವಿಯಾಗಿ ಮತದಾನ ನಡೆಯಲಿ ಎಂದು ಹಾರೈಕೆಯೊಂದಿಗೆ, ಮತಗಟ್ಟೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಗಮಿಸಿದಾಗ ಮತಗಟ್ಟೆಯಲ್ಲಿ ದೀಪಬೆಳಗಿಸಿ ಬಳಿಕ ಕಳಸೆಯಲ್ಲಿ ತೆಂಗಿನ ಹಿಂಗಾರ ಅರಳಿಸಿ

ಸ್ವಾಗತಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲಿ ಚುನಾವಣೆಗೆ ಮತಗಟ್ಟೆಗೆ ಆಗಮಿಸುವ ಅಧಿಕಾರಿಗಳಿಗೆ ಈ ರೀತಿಯ ಸ್ವಾಗತ ದೊರೆತಿರುವುದು ಇದು ಪ್ರಥಮವಾಗಿದೆ. ಇದನ್ನು ಚಾರ್ಮಾಡಿಯ ಬಿಎಲ್‌ಒ ಮತ್ತು ಪಂಚಾಯತು ಸಿಬ್ಬಂದಿಗಳು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

Related posts

ಸೋಣಂದೂರು-ಪಣಕಜೆಯ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆ

Suddi Udaya

ನಿಡ್ಲೆ ಗ್ರಾ.ಪಂ. ಅಧ್ಯಕ್ಷರಾಗಿ ಶ್ಯಾಮಲ, ಉಪಾಧ್ಯಕ್ಷರಾಗಿ ರುಕ್ಮಯ್ಯ ಪೂಜಾರಿ ಆಯ್ಕೆ

Suddi Udaya

ನಡ, ಮಡಂತ್ಯಾರು ಮತ್ತು ಕಲ್ಲೇರಿಯಲ್ಲಿ ಹರೀಶ್ ಪೂಂಜರ ಬಹಿರಂಗ ಪ್ರಚಾರ ಸಭೆ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 4971 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಳ್ಳಾಜೆಯವರಿಂದ ಮತದಾನ

Suddi Udaya
error: Content is protected !!