July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆತಾಲೂಕು ಸುದ್ದಿ

ಚುನಾವಣಾ ಕೇಂದ್ರದ ಎಡವಟ್ಟು: ಮತಗಟ್ಟೆ ಸಂಖ್ಯೆ ಬದಲಾವಣೆ: ಕೊಕ್ಕಡದಿಂದ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಿದ ಮತದಾರ

ಕೊಕ್ಕಡದಲ್ಲಿ ಮತ ಚಲಾಯಿಸಬೇಕಿದ್ದ ಮತದಾರರೊಬ್ಬರು ಮತಗಟ್ಟೆ ಸಂಖ್ಯೆ ಬದಲಾಗಿ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಬೇಕಾಗಿ ಬಂದ ಘಟನೆ ಎ.26ರಂದು ನಡೆದಿದೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕೊಕ್ಕಡ ಬಳಿಯ ಅಶೋಕ ಎಂಬವರಿಗೆ ಮತಗಟ್ಟೆ ಸಂಖ್ಯೆ 23ರಲ್ಲಿ (ಕಾಪಿನಬಾಗಿಲು ಸೈಂಟ್ ಜೋನ್ ಅನುದಾನಿತ ಹಿ.ಪ್ರಾ.ಶಾಲೆ ಕೌಕ್ರಾಡಿ) ಮತ ಚಲಾಯಿಸಬೇಕಿತ್ತು. ಅಶೋಕರವರು ಈ ಹಿಂದೆ ಪುಣೆಯಲ್ಲಿ ಉದ್ಯೋಗ ಮಾಡಿಕೊಂಡು ಅಲ್ಲೇ ಇದ್ದ ಕಾರಣ ಮತ ಚಲಾಯಿಸಲು ಅಲ್ಲಿಯ ಮತದಾನ ಕೇಂದ್ರವನ್ನು ಆಶ್ರಯಿಸಿದ್ದರು. ಆದರೆ ಅವರು ಇತ್ತೀಚೆಗೆ ಕೊಕ್ಕಡದ ತನ್ನ ಊರಿಗೆ ಬಂದು ನೆಲೆಸಿದ ಕಾರಣ ಮತದಾನ ಕೇಂದ್ರವನ್ನು ಊರಿಗೆ ಬದಲಾಯಿಸಿದ್ದರು. ಮತದಾನ ಕೇಂದ್ರ ಬದಲಾಯಿಸುವ ಸಂದರ್ಭದಲ್ಲಿ ಚುನಾವಣಾ ಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ 23ರ ಬದಲು 213 ಎಂದು ನಮೂದಾಗಿ ಎಡವಟ್ಟಾಯಿತು. ಇದರಿಂದಾಗಿ ಅಶೋಕರವರಿಗೆ 23ರ ಮತಗಟ್ಟೆ ಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ವೆಬ್ ಸೈಟ್ ಮೂಲಕ ಸರ್ಚ್ ಮಾಡಿ 213 ಮತಗಟ್ಟೆ ಕೇಂದ್ರವು ಮರ್ಕಂಜದಲ್ಲಿ ಮಿತ್ತಡ್ಕದಲ್ಲಿ ಬರುವುದನ್ನು ಖಚಿತಪಡಿಸಿ ಸುಮಾರು 52ಕಿ.ಮೀ. ದೂರ ಬಂದು ಮಿತ್ತಡ್ಕ ದ.ಕ.ಜಿ.ಪ.ಹಿ.ಪ್ರಾ.ಶಾಲೆಯಲ್ಲಿ ಮತ ಚಲಾಯಿಸಿದರು.

ಅಶೋಕರವರ ಮನೆಯವರು 23ನೇ ಮತಗಟ್ಟೆಯಲ್ಲಿಯೇ ಮತ ಚಲಾಯಿಸಿದ್ದಾರೆ. “ನಾನು ದೇಶಕ್ಕಾಗಿ ಇಲ್ಲಿಗೆ ಬಂದು ಮತ ಚಲಾಯಿಸಿದ್ದೇನೆ” ಎಂದು ಅಲ್ಲಿ ಸೇರಿದ್ದ ಕಾರ್ಯಕರ್ತರೊಡನೆ ತನ್ನ ಮಾತನ್ನು ಹಂಚಿಕೊಂಡಿದ್ದಾರೆ.

Related posts

ಮೇಲಂತಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಜೇಸಿಂತಾ ಮೋನಿಸ್ ನಿಧನ

Suddi Udaya

ಸವಣಾಲು ಶ್ರೀ ದುರ್ಗಾ ಕಾಳಿಕಾಂಬ ದೇವಸ್ಥಾನದ ಅರ್ಚಕ ವಿಜಯ ಭಟ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಚಂಡಿಕಾ ಹೋಮ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ

Suddi Udaya

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪನಾ ದಿನಾಚರಣೆ ಮತ್ತು ಧ್ವಜ ಚೀಟಿ ಬಿಡುಗಡೆ

Suddi Udaya

ಮಡಂತ್ಯಾರು: ಆನೆಗುಂದಿ ಗುರುಸೇವಾ ಪರಿಷತ್ ಇದರ ಆಶ್ರಯದಲ್ಲಿ ಚಿಂತನ – ಮಂಥನ ಸಮಾವೇಶದ ಉದ್ಘಾಟನೆ

Suddi Udaya

ಉಜಿರೆ ಸಿದ್ಧವನ ಗುರುಕುಲದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರಿಗೆ ಪ್ರಶಿಕ್ಷಣ ಕಾರ್ಯಕ್ರಮ

Suddi Udaya
error: Content is protected !!