ಗ್ರಾಮಾಂತರ ಸುದ್ದಿಚಿತ್ರ ವರದಿ

ಪೆರಾಲ್ದರಕಟ್ಟೆ ಬದ್ರಿಯಾ ಜುಮಾ ಮಸೀದಿ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಕಮಿಟಿ ರಚನೆ

ತೆಂಕಕಾರಂದೂರು: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆ ಜು. 25 ರಂದು ಜುಮಾ ನಮಾಝಿನ ಬಳಿಕ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದರಸ ಹಾಲ್ ಪೆರಾಲ್ದರಕಟ್ಟೆಯಲ್ಲಿ ನಡೆಯಿತು.


ಖತೀಬರಾದ ಶಂಸುದ್ದೀನ್ ದಾರಿಮಿ ಇವರು ದುಹಾಃ ನೇರವೇರಿಸಿದರು. ಸ್ವಲಾತ್ ಕಮೀಟಿ ಪೆರಾಲ್ದರಕಟ್ಟೆ ಇದರ ಪ್ರದಾನ ಕಾರ್ಯದರ್ಶಿಯಾದ ಹಮೀದ್ ಬಾವಿಬಳಿ ವಾರ್ಷಿಕ ವರದಿ ವಾಚನ ಮಾಡಿದರು. ಬದ್ರಿಯಾ ಆಡಳಿತ ಸಮಿತಿಯ ಅಧ್ಯಕ್ಷ ನವಾಝ್ ಶರೀಫ್ ರವರು ಅಧ್ಯಕ್ಷತೆ ವಹಿಸಿದರು. ಎರಡು ವರ್ಷಗಳ ಅವದಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಹಿಂದಿನ ಸ್ವಲಾತ್ ಕಮೀಟಿಯನ್ನು ಬರ್ಕಾಸ್ತುಗೊಳಿಸಿ ನೂತನ ಸ್ವಲಾತ್ ಕಮಿಟಿಗೆ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಗೌರವ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಕಾರಂದೂರು, ನೂತನ ಅಧ್ಯಕ್ಷರಾಗಿ ಹಸೈನಾರ್ ಹಸೈ ಮಂಜೊಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಬಾವಿಬಳಿ, ಕೋಶಾಧಿಕಾರಿಯಾಗಿ ಬಶೀರ್ ಮಸೀದಿಬಳಿ, ಉಪಾದ್ಯಕ್ಷರಾಗಿ ಅಕ್ಬರ್ ಮಟ್ಲ, ಕಾರ್ಯದರ್ಶಿಯಾಗಿ ಶಮೀರ್ ಮಸೀದಿಬಳಿ ಹಾಗೂ ಕಾರ್ಯಕಾರಣಿ ಸದಸ್ಯರಾಗಿ ನವಾಝ್ ಶರೀಫ್ ಕಟ್ಟೆ, ಸಾದಿಕ್ ಮಸೀದಿಬಳಿ, ಶಂಸುದ್ದೀನ್ ಕಟ್ಟೆ, ಇಬ್ರಾಹಿಂ ತಮುನಾಕ ಮಂಜೊಟ್ಟಿ, ಸಿದ್ದಿಕ್ ಮಸೀದಿಬಳಿ, ಅಶ್ರಫ್ ಗುಂಡೇರಿ, ಇಕ್ಬಾಲ್ ದರ್ಖಾಸ್ ನವಾಝ್ ಮಂಜೊಟ್ಟಿಹಾಗೂ ಸುಲೈಮಾನ್ ಕಟ್ಟೆ ಆಯ್ಕೆಯಾದರು.

Related posts

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ: ಸ೦ಘದ ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ.

Suddi Udaya

ಉರುವಾಲು ಕಾರಿಂಜ ಶ್ರೀ ವನಶಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಗೆ ಮನವಿ ಸಲ್ಲಿಸಿ ಸಮಾಲೋಚನೆ

Suddi Udaya

ಕಳೆಂಜ: ವಳಗುಡ್ಡೆ ನಿವಾಸಿ ಶೀನಪ್ಪ ಗೌಡ ನಿಧನ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆ

Suddi Udaya

ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್ ಪ್ರಭಾಕರ್ ವಿಧಿವಶ

Suddi Udaya

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ರೇಡಿಯೋಲಜಿ ವಿಭಾಗ ಮತ್ತು ನೂತನ ಸಿ.ಟಿ. ಸ್ಕ್ಯಾನಿಂಗ್ ಪ್ರಾರಂಭೋತ್ಸವ

Suddi Udaya
error: Content is protected !!