26.7 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಕ್ಸೆಲ್ ಪದವಿ ಪೂರ್ವ ಕಾಲೇಜಿಗೆ ಮರು ಮೌಲ್ಯ ಮಾಪನದಲ್ಲಿ ಹೆಚ್ಚಿದ ರ್‍ಯಾಂಕ್ ಗಳು

ಗುರುವಾಯನಕೆರೆ: ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚು ಅಂಕಗಳನ್ನು ಪಡೆದು, ರ್‍ಯಾಂಕ್ ಹೆಚ್ಚಿಸಿಕೊಂಡಿದ್ದಾರೆ.

600 ಅಂಕಗಳ ಪೈಕಿ 595 ಅಂಕಗಳನ್ನು ಪಡೆದ ಅನುಪ್ರಿಯ ರಾಜ್ಯಕ್ಕೆ 4 ನೆಯ ಸ್ಥಾನ, ತಲಾ 594 ಪಡೆದ ಕೃತ್ತಿಕಾ ಸಿ ಬಿ ಹಾಗೂ ಅಭಿಷೇಕ್ ವೈ.ಎಸ್ ರಾಜ್ಯಕ್ಕೆ 5 ನೆಯ ಸ್ಥಾನ,592 ಅಂಕಗಳನ್ನು ಪಡೆದ ಆಶ್ರಿತ 7 ನೆಯ ಸ್ಥಾನ, ತಲಾ 591 ಅಂಕಗಳನ್ನು ಪಡೆದ ಧನ್ವಿ ಭಟ್, ತನ್ಮಯಿ ಶ್ಯಾನುಭಾಗ್, ರಾಜ್ಯಕ್ಕೆ 8 ನೆಯ ಸ್ಥಾನ, 589 ಅಂಕಗಳನ್ನು ಪಡೆದ ಸಂಜನಾ ಕೆ ಆರ್ ಹಾಗೂ ವೈಭವ ಶೆಟ್ಟಿ ರಾಜ್ಯಕ್ಕೆ 10ನೆಯ ಸ್ಥಾನ ಪಡೆದುಕೊಂಡಿದ್ದಾರೆ.


ತಲಾ 588 ಅಂಕಗಳನ್ನು ಪಡೆದುಕೊಂಡ ರಮ್ಯ ನವೀನ್, ತೃಷ ಶೇಖರ್, ಶಮಂತ್ ಎನ್ ಎಲ್, ತಲಾ 585 ಅಂಕಗಳನ್ನು ಪಡೆದುಕೊಂಡ ಪೂರ್ವಿಕ ಪೂಜಾರಿ, ಮಾನ್ಯ ಎಂ. ಜೈನ್, ಎಂ. ಕೃಷ್ ಕುಮಾರ್ ತಮ್ಮ ಅಂಕಗಳನ್ನು ಹೆಚ್ಚಿಸಿ ಕೊಂಡು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡವರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ , ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related posts

ಪುದುವೆಟ್ಟಿನಲ್ಲಿ ವಿಕಲಚೇತನರ ಸಮನ್ವಯ ಗ್ರಾಮಸಭೆ

Suddi Udaya

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya

ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ ಜಗದೀಶ್ಚಂದ್ರ ಡಿ ಕೆ ಆಯ್ಕೆ

Suddi Udaya

ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!