ಹಜ್ ಯಾತ್ರಿಗೆ ಪೆರಾಲ್ದರಕಟ್ಟೆ ಜುಮಾ ಮಸ್ಜಿದ್ ಕಮಿಟಿಯಿಂದ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ: ಪವಿತ್ರ ಹಜ್ಜ್ ಯಾತ್ರೆಗೆ ಸಿದ್ಧವಾಗಿರುವ ಬದ್ರಿಯಾ ಯಂಗ್ ಮೆನ್ಸ್ ಪೆರಾಲ್ದರಕಟ್ಟೆ ಇದರ ಮಾಜಿ ಅಧ್ಯಕ್ಷ ಹಾಗೂ ಬದ್ರಿಯಾ ಜುಮಾ ಮಸ್ಜಿದ್ ಪೆರಾಲ್ದರಕಟ್ಟೆ ಇದರ ಕಾನೂನು ಸಲಹೆಗಾರ ಶಮೀಮ್ ಯೂಸುಫ್ ಅವರನ್ನು ಬದ್ರಿಯಾ ಆಡಳಿತ ಸಮಿತಿಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಮಸ್ಜಿದ್ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ, ಖತೀಬ್ ಶಂಶುದ್ದೀನ್ ದಾರಿಮಿ, ಗೌರವ ಅಧ್ಯಕ್ಷ ಶೇಕಬ್ಬ ಹಾಜಿ ದರ್ಖಾಸ್ ಇವರ ನೇತೃತ್ವದಲ್ಲಿ ಸನ್ಮಾನ ನಡೆಯಿತು.

ಈ ಸಂದರ್ಭದಲ್ಲಿ ಬದ್ರಿಯಾ ಆಡಳಿತ ಸಮಿತಿ ಸದಸ್ಯರು ಸ್ವಲಾತ್ ಕಮಿಟಿ ಸದಸ್ಯರು, ಎಸ್‌ಕೆಎಸ್‌ಎಸ್‌ಎಫ್ ಪೆರಾಲ್ದರಕಟ್ಟೆ ಶಾಖೆಯ ಸದಸ್ಯರು ಹಾಗೂ ಬದ್ರಿಯಾ ಯಂಗ್ ಮೆನ್ಸ್ ಪೆರಾಲ್ದರಕಟ್ಟೆ ಸದಸ್ಯರು ಉಪಸ್ಥಿತಿ ಇದ್ದರು.

Leave a Comment

error: Content is protected !!