ಮಂಗಳೂರು ಬಿಜೈನಲ್ಲಿ ಸ್ನೇಹ ಲಂಚ್ ಹೋಮ್ ಶುಭಾರಂಭ

Suddi Udaya

ಬೆಳ್ತಂಗಡಿ:ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣದ ಸಮೀಪದ ಆದಿತ್ಯ ಕಮರ್ಷಿಯಲ್ ಕಾಂಪ್ಲೆಕ್ಸ್‌ನ 1 ನೇ ಮಹಡಿಯಲ್ಲಿ ಶರತ್ ಶೆಟ್ಟಿ‌ ಮತ್ತು ಶೇಷಗಿರಿ ಪೂಜಾರಿ ಪಾಲುದಾರಿಕೆಯ ಸ್ನೇಹ ಲಂಚ್ ಹೋಮ್ ಹೋಟೆಲ್ ನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿಯವರು ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಭೂಮಿ ರೆಸಿಡೆನ್ಸಿ ಮಾಲಕರಾದ ವಿಶ್ವನಾಥ, ಉದ್ಯಮಿ ಚಂದ್ರಹಾಸ ಪಕಳ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಳಂಜ, ಮುದ್ರಾ ಪ್ರಿಂಟರ್ಸ್ ಮಾಲಕ ಕೇಶವ ಪೂಜಾರಿ, ಬೆಳ್ತಂಗಡಿಯ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್,ವೇಣುಗೋಪಾಲ್ ರೈ ನೂಜಿ, ಮುಂಬೈ ಉದ್ಯಮಿಗಳಾದ ತುಕಾರಾಮ್ ರೈ ಮತ್ತು ಸಂತೋಷ್ ರೈ, ಮಾಜಿ ಜಿ ಪಂ ಸದಸ್ಯ ಕೆ ಕೆ ಶಾಹುಲ್ ಹಮೀದ್, ಮುಂತಾದವರು ಭೇಟಿ ನೀಡಿ ಶುಭ ಹಾರೈಸಿದರು.

Leave a Comment

error: Content is protected !!