July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಲಾಯಿಲ: ಇಲ್ಲಿಯ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಕಸ್ತೂರಿ ರವರು ಮಾನಸಿಕ ಖಾಯಿಲೆಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟ ಘಟನೆ ಮೇ.10 ರಂದು ನಡೆದಿದೆ.

ಚೇತನ್ ರವರ ದೂರಿನಂತೆ ಲಾಯಿಲ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಚೇತನ್ ರವರ ತಾಯಿ ಶ್ರೀಮತಿ ಕಸ್ತೂರಿ (69 ವರ್ಷ)ರವರು ಸುಮಾರು 3-4 ತಿಂಗಳಿಂದ ಮಾನಸಿಕ ಸಮಸ್ಯೆಯಿದ್ದು ಜೊತೆಗೆ ತಲೆಕೂದಲಿಗೆ ಸಂಬಂಧಪಟ್ಟ ಖಾಯಿಲೆಯಿದ್ದು ಅದಕ್ಕೆ ಜೌಷಧಿ ಹಾಕಿದ್ದು ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಅಂದರೆ ಅಲರ್ಜಿ ಆಗಿರುತ್ತದೆ. ಮೇ 09 ರಂದು ಬೆಳಿಗ್ಗೆ ಚೇತನ್ ಪೇಟೆಗೆ ಹೋಗಿದ್ದು ನಂತರ ಮನೆಗೆ ಬಂದು ನೋಡಿದಾಗ ಕಸ್ತೂರಿ ರವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಮೇ10 ರಂದು ಬೆಳಿಗ್ಗೆ ಸ್ಥಳೀಯರು ಪಿರ್ಯಾದಿದಾರರಿಗೆ ಕರೆ ಮಾಡಿ ಕಸ್ತೂರಿ ರವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಶ್ರೀ ಬಾಲಚಾಮುಂಡಿ ದೈವಸ್ಥಾನದ ಹಿಂಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚೇತನ್ ಹೋಗಿ ನೋಡಿದಾಗ ಕಸ್ತೂರಿ ರವರು ಮೃತಪಟ್ಟಿರುವುದಾಗಿದೆ.

ಚೇತನ್ ತಾಯಿ ಕಸ್ತೂರಿ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ 21/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಕಿಡ್ಸ್ ವಿಕ್ಟರಿ ಫಿಯೇಸ್ಟಾ 2025’

Suddi Udaya

ಉಜಿರೆ: ಹಳೆಪೇಟೆ ನಿವಾಸಿ ಜಿ. ವಿಠಲದಾಸ್ ಪ್ರಭು ನಿಧನ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದಿಂದ ಆಟಿದ ಪೊಲಬು

Suddi Udaya

ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

Suddi Udaya

ಫೋಟೊಗ್ರಾಫಿ ಸ್ಫರ್ಧೆ: ಡಾ. ಚಂದ್ರಹಾಸ್ ಚಾರ್ಮಾಡಿ ಪ್ರಥಮ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯ ವತಿಯಿಂದ ಕೊಯ್ಯೂರು ಸ.ಹಿ.ಪ್ರಾ. ಶಾಲೆಗೆ ಗಡಿಯಾರ ಕೊಡುಗೆ

Suddi Udaya
error: Content is protected !!