26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

ಲಾಯಿಲ: ಇಲ್ಲಿಯ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಕಸ್ತೂರಿ ರವರು ಮಾನಸಿಕ ಖಾಯಿಲೆಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟ ಘಟನೆ ಮೇ.10 ರಂದು ನಡೆದಿದೆ.

ಚೇತನ್ ರವರ ದೂರಿನಂತೆ ಲಾಯಿಲ ಶಿವಾಜಿನಗರ ಕಕ್ಕೇನಾ ಮನೆ ನಿವಾಸಿ ಚೇತನ್ ರವರ ತಾಯಿ ಶ್ರೀಮತಿ ಕಸ್ತೂರಿ (69 ವರ್ಷ)ರವರು ಸುಮಾರು 3-4 ತಿಂಗಳಿಂದ ಮಾನಸಿಕ ಸಮಸ್ಯೆಯಿದ್ದು ಜೊತೆಗೆ ತಲೆಕೂದಲಿಗೆ ಸಂಬಂಧಪಟ್ಟ ಖಾಯಿಲೆಯಿದ್ದು ಅದಕ್ಕೆ ಜೌಷಧಿ ಹಾಕಿದ್ದು ಅವರ ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಗಾಯಗಳು ಅಂದರೆ ಅಲರ್ಜಿ ಆಗಿರುತ್ತದೆ. ಮೇ 09 ರಂದು ಬೆಳಿಗ್ಗೆ ಚೇತನ್ ಪೇಟೆಗೆ ಹೋಗಿದ್ದು ನಂತರ ಮನೆಗೆ ಬಂದು ನೋಡಿದಾಗ ಕಸ್ತೂರಿ ರವರು ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಮೇ10 ರಂದು ಬೆಳಿಗ್ಗೆ ಸ್ಥಳೀಯರು ಪಿರ್ಯಾದಿದಾರರಿಗೆ ಕರೆ ಮಾಡಿ ಕಸ್ತೂರಿ ರವರು ಲಾಯಿಲಾ ಗ್ರಾಮದ ಕಾಶಿಬೆಟ್ಟು ಶ್ರೀ ಬಾಲಚಾಮುಂಡಿ ದೈವಸ್ಥಾನದ ಹಿಂಬದಿಯಲ್ಲಿ ಬಿದ್ದುಕೊಂಡಿರುವುದಾಗಿ ತಿಳಿಸಿದ್ದು ಚೇತನ್ ಹೋಗಿ ನೋಡಿದಾಗ ಕಸ್ತೂರಿ ರವರು ಮೃತಪಟ್ಟಿರುವುದಾಗಿದೆ.

ಚೇತನ್ ತಾಯಿ ಕಸ್ತೂರಿ ರವರು ಅವರಿಗಿದ್ದ ಮಾನಸಿಕ ಖಾಯಿಲೆ ಯಿಂದ ಅಥವಾ ಬೇರೆ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಯು ಡಿ ಆರ್ ನಂ 21/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ತಂಗಡಿ: ಹಳೆಕೋಟೆ ಸಮೀಪ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ, ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಉಚಿತ ಯೋಗ ಶಿಬಿರಕ್ಕೆ ಚಾಲನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ವಿಜ್ಞಾನ ಪ.ಪೂ. ಕಾಲೇಜಿಗೆ ಶೇ. 99.76 ಫಲಿತಾಂಶ: 254 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್

Suddi Udaya

ನಾಲ್ಕೂರು: ನಿಟ್ಟಡ್ಕ ಪಲ್ಕೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯ ರಾಶಿಪೂಜೆ

Suddi Udaya

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಮೇ 30 ರಂದು 11ಕೆವಿ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!