ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಚಿರತೆ ಓಡಾಟ: ಭಯಭೀತರಾದ ಜನರು

Suddi Udaya

ಬೆಳ್ತಂಗಡಿ: ಇಲ್ಲಿಯ ಹುಣ್ಸೆಕಟ್ಟೆಯ ಪಂಜಿರ್ಪು ಎಂಬಲ್ಲಿ ಬೆಳ್ಳಂಬೆಳ್ಳಗೆ ಚಿರತೆಯು ಓಡಾಡುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಮೇ 11 ರಂದು ಕಂಡುಬಂದಿದೆ.

ಪಂಜಿರ್ಪು ಗಣೇಶ್ ಐತಾಳ್ ರವರ ಮನೆಯ ಸಮೀಪ ಬೆಳಿಗ್ಗೆ 4.00 ಗಂಟೆಯ ಹೊತ್ತಿಗೆ ರಸ್ತೆಯ ಬದಿ ಓಡಾಡುತ್ತಿರುವ ದೃಶ್ಯ ಮನೆಯ ಸಿಸಿ ಕ್ಯಾಮರದಲ್ಲಿ ಪತ್ತೆಯಾಗಿದ್ದು, ಹುಣ್ಸೆಕಟ್ಟೆಯ ಪಂಜಿರ್ಪು ಬಳಿ ಹಲವು ಮನೆಗಳಿದ್ದು ಇಲ್ಲಿಯ ಜನರು ಭಯಭೀತರಾಗಿದ್ದಾರೆ.
ಚಿರತೆ ಓಡಾಟ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ:

Leave a Comment

error: Content is protected !!