ಉಜಿರೆ ಶ್ರೀ ಸರಸ್ವತಿ ಭಜನಾ ಮಂದಿರಕ್ಕೆ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಭೇಟಿ

Suddi Udaya

ಉಜಿರೆ : ಶ್ರೀ ಸರಸ್ವತಿ ಭಜನಾ ಮಂದಿರ ( ರಿ) ವಿವೇಕಾನಂದ ನಗರ ಉಜಿರೆ ಇಲ್ಲಿ ನಡೆಯುತ್ತಿದ್ದ ವಾರದ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಇವರು ಭಾಗವಹಿಸಿದರು. ಭಜನಾ ಮಂಡಳಿಯ ವತಿಯಿಂದ ಇವರನ್ನು ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ರವರು ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಜನಾರ್ದನ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.


ಭಜನಾ ಕಾರ್ಯಕ್ರಮದ ನಂತರ ಭಜನಾ ಪರಿಷತ್ತಿನ ತಾಲೂಕು ಕಾರ್ಯದರ್ಶಿಯವರು ಭಜನಾ ಮಂಡಳಿಗಳಲ್ಲಿ ಹಿಂದೆ ನಡೆಯುತ್ತಿದ್ದ ಭಜನೆ ಈಗ ಬದಲಾವಣೆಯ ದಾರಿಯಲ್ಲಿ ಆಗುತ್ತಿರುವ ಭಜನೆ ಹಾಗೂ ಇದರಿಂದ ಮುಂದಿನ ದಿನಗಳಲ್ಲಿ ನಡೆಯಬಹುದಾದ ಭಜನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಾ ಭಜನಾ ಮಂಡಳಿಯ ಪದಾಧಿಕಾರಿಗಳೊಂದಿಗೆ ಹಾಗೂ ಸದಸ್ಯರುಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಕೆಲವು ಸಲಹೆಗಳನ್ನು ಸ್ವೀಕರಿಸಿದರು.


ಭಜನಾ ಮಂಡಳಿಯ ಜೊತೆ ಕಾರ್ಯದರ್ಶಿಯಾದ ವಿನೋದ್ ಕುಮಾರ್ ರವರು ಸ್ವಾಗತಿಸಿ, ವಂದಿಸಿದರು.

Leave a Comment

error: Content is protected !!