July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುಂಡೂರಿ: ಮಂಜಪ್ಪ ದೇವಾಡಿಗರಿಗೆ ನುಡಿನಮನ ಕಾರ್ಯಕ್ರಮ

ವೇಣೂರು: ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನ ಮಂಡಳಿ ಸ್ಥಾಪಕ ಸದಸ್ಯರಾಗಿ, ಭಜಕ ಗುರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಮಂಜಪ್ಪ ದೇವಾಡಿಗ ಗೋಳಿದಡ್ಕ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ತುಂಬೆದಲೆಕ್ಕಿ ಭಜನ ಮಂದಿರದ ಸಭಾಂಗಣದಲ್ಲಿ ಜ. 18ರಂದು ನಡೆಯಿತು.

ತುಂಬೆದಲೆಕ್ಕಿ ಭಜನ ಮಂದಿರದ ಗೌರವ ಸಲಹೆಗಾರರಾಗಿರುವ ಲಕ್ಷ್ಮೀನಾರಾಯಣ ಆಚಾರ್ಯ ಸಂಗಬೆಟ್ಟು ಅವರು ನುಡಿನಮನಗೈದು, ಮಂಜಪ್ಪ ದೇವಾಡಿಗರ ಗುಣಗಾನ ಮಾಡಿದರು. ಪ್ರಾಧ್ಯಾಪಕ ಗುಣಪ್ರಸಾದ್ ಕಾರಂದೂರು ಶ್ರದ್ಧಾಂಜಲಿ ಅರ್ಪಿಸಿ, ಸೌಮ್ಯ ಸ್ವಭಾವದ ಮಂಜಪ್ಪ ದೇವಾಡಿಗರು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಭಜನೆಯನ್ನೇ ಜೀವನವನ್ನಾಗಿಸಿದ ಅವರು ಮಕ್ಕಳಿಗೆ ಸ್ಪೂರ್ತಿದಾಯಕರಾಗಿದ್ದರು, ಅವರ ನಿಧನ ತುಂಬೆದಲೆಕ್ಕಿ ಭಜನ ಮಂಡಳಿಗೆ ತುಂಬಲಾಗದ ನಷ್ಟ ಎಂದರು.

ವೇಣೂರಿನ ಉದ್ಯಮಿ ಹಿರಿಯರಾದ ಕೆ. ಭಾಸ್ಕರ ಪೈ, ಕೆ. ವಿಜಯ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರುಗಳಾದ ಶಾಲಿನಿ, ವೀಣಾ, ಭಜನ ಮಂದಿರದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಲಿಂಗಪ್ಪ ದೇವಾಡಿಗ ಗೋಳಿದಡ್ಕ ಸೇರಿದಂತೆ ಮಂಜಪ್ಪ ದೇವಾಡಿಗರ ಕುಟುಂಬಿಕರು, ಹಿತೈಷಿಗಳು, ಭಜನ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾರ್ವಜನಿಕರ ಪರವಾಗಿ ಜಯಂಶಕರ ಹೆಗ್ಡೆ ಅವರು ಗುಣಗಾನಗೈದರು. ಹರೀಶ್ ಕುಮಾರ್ ಪೊಕ್ಕಿ ಪ್ರಸ್ತಾವಣೆಗೈದು, ಸಭೆಯನ್ನು ನಿರ್ವಹಿಸಿದರು.

Related posts

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Suddi Udaya

ಮಚ್ಚಿನ: ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರ

Suddi Udaya

ಸಮಾಜ ಸೇವೆ ಮುಖೇನಾ ಗುರುತಿಸಿಕೊಂಡಿರುವ ಉಜಿರೆ ಬದುಕು ಕಟ್ಟೋಣ ಸೇವಾ ಟ್ರಸ್ಟ್ ಸಂಚಾಲಕ,ಉದ್ಯಮಿ ಮೋಹನ್ ಕುಮಾರ್ ಗೆ ಪ್ರತಿಷ್ಠಿತ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿ-2024 ಪ್ರದಾನ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ 500 ಸೇವಾ ಚಟುವಟಿಕೆ ಗುರಿ : ನ.4 ರಂದು ರಾಜ್ಯಪಾಲರ ಭೇಟಿ ದಿನ ನಾಲ್ಕು ಅರ್ಹ ಕುಟುಂಬಕ್ಕೆ ಮನೆ ಹಸ್ತಾಂತರ

Suddi Udaya

ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ನಿಕಟಪೂರ್ವ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್ ಆಯ್ಕೆ

Suddi Udaya
error: Content is protected !!