April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸುಮಾರು 700 ವರ್ಷಗಳ ಇತಿಹಾಸ ಹೊಂದಿದ್ದ ತೆಕ್ಕಾರಿನ ಶ್ರೀಗೋಪಾಲಕೃಷ್ಣ ದೇವರಿಗೆ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನೂರೈವತ್ತು ವರ್ಷಗಳ ನಂತರ ಬಾಲಾಲಯದಲ್ಲಿ ಪ್ರಥಮ ಪೂಜೆಯನ್ನು ಮೇ 11 ರಂದು ನಡೆಸಲಾಯಿತು.

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕಾಲಚಕ್ರದಲ್ಲಿ ಅನ್ಯ ಧರ್ಮದವರ ವಶದಲ್ಲಿದ್ದ ಪರಿಣಾಮವಾಗಿ ದೇವಸ್ಥಾನದ ಕುರುಹುಗಳು ನಾಶವಾಗಿತ್ತು. ಅಲ್ಲಿ ಅಡಿಕೆ ಕೃಷಿಮಾಡಿ ಅತಿಕ್ರಮಣ ಮಾಡಲಾಗಿತ್ತು, ಹಿರಿಯರು ಆ ಸ್ಥಳದಲ್ಲಿ ಶ್ರೀಕೃಷ್ಣ ದೇವರ ಸಾನಿಧ್ಯವಿದ್ದ ಜಾಗದಲ್ಲೇ ಮತ್ತೆ ದೇಗುಲ ನಿರ್ಮಾಣ ಮಾಡಲು ಪ್ರಯತ್ನಿಸಿ ದೇವಸ್ಥಾನದ ಜಮೀನು ಪಡೆಯಲು ನಿರಂತರ ಪ್ರಯತ್ನ ಹಿಂದೂ ಸಂಘಟನೆಯ ಜೊತೆಗೂಡಿ ಮಾಡಲಾಗಿತ್ತು ,ದೇವಸ್ಥಾನದ ಪುನರುತ್ಥಾನಕ್ಕೆ ಕಳೆದ ವರ್ಷವೇ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ದೇವರ ಕಟ್ಟೆ ನಿರ್ಮಿಸಿ ಭಜನೆ ನಡೆಸಲಾಗಿತ್ತು.

ಈ ಎಲ್ಲ ಬೆಳವಣಿಗೆಗಳ ಬಳಿಕ ನಡೆದ ಪ್ರಶ್ನಾ ಚಿಂತನೆಯಲ್ಲಿ ಗೋಪಾಲಕೃಷ್ಣ ದೇವರ ಸಾನಿಧ್ಯ ಇರುವುದಕ್ಕೆ ಪುಷ್ಠಿ ದೊರತಿತ್ತು ಮತ್ತು ಸ್ಥಳದಲ್ಲಿ ಉತ್ಖನನ ನಡೆಸಿದರೆ ಶ್ರೀದೇವರಿಗೆ ಸಂಬಂಧಿಸಿದ ಪರಿಕರಗಳು ಲಭ್ಯವಾಗುವ ಕುರಿತು ಮಾಹಿತಿ ತಿಳಿದುಬಂದಿತ್ತು. ನಂತರ ದೇವಳದ ಜಾಗಕ್ಕೆ ಸಂಬಂಧಿಸಿದ ಅಡಿಕೆ ತೋಟದಲ್ಲಿ ಮಣ್ಣಿಂದ ಆವರಿಸಿದ ಬಾವಿಯಲ್ಲಿ ಶ್ರೀ ದೇವರ ಭಗ್ನಗೊಂಡ ಮೂರ್ತಿ ದೇವರಿಗೆ ಸಂಬಂಧಪಟ್ಟ ಪರಿಕರಗಳು ದೊರಕಿತ್ತು.


ನಂತರ ದೇವಸ್ಥಾನ ನಿರ್ಮಾಣಕ್ಕೆ ಅವಶ್ಯಕತೆಯ ಜಮೀನು ಒಟ್ಟು ಮಾಡುವ ಕಾರ್ಯವನ್ನು ಮಾಡಲಾಯಿತು. ನಂತರ ಏ. 22 ರಂದು ದೇವಸ್ಥಾನವಿದ್ದ ಭಟ್ರಬೈಲು ಜಮೀನಿನಲ್ಲಿ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದರು. ಇಂದು ಮುಂಜಾನೆಯ ಶುಭ ಘಳಿಗೆಯಲ್ಲಿ ತೆಕ್ಕಾರು ಆಸುಪಾಸಿನ ಹಿಂದೂ ಬಾಂಧವರ ಉಪಸ್ಥಿತಿಯಲ್ಲಿ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ಉಪಸ್ಥಿತಿಯಲ್ಲಿ ಉತ್ಖನನದ ವೇಳೆ ಸಿಕ್ಕಿದ ಅದೇ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹವನ್ನು ಬಾಲಾಲಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.

Related posts

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya

ರಿಕ್ಷಾದಲ್ಲಿ ಬಿಟ್ಟು ಹೋದ ಬ್ಯಾಗ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ನಾಗರಾಜ್ ಮರಕಡ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Suddi Udaya

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕಾಶಿಬೆಟ್ಟು ಹೆದ್ದಾರಿಯಲ್ಲಿ ನಿಮಾ೯ಣವಾದ ಬಾವಿಯಾಕಾರದ ಹೊಂಡ, ಗುಂಡಿಗಳು ಸಂಚಾರಕ್ಕೆ ವಾಹನಗಳ ಪರದಾಟ, ಪ್ರತಿದಿನ ವಾಹನ ಬ್ಲಾಕ್

Suddi Udaya

ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ: ಬೆಂಗಳೂರಿನ ವೃದ್ಧ ಧಮ೯ಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆ

Suddi Udaya

ಗುರುವಾಯನಕೆರೆ ಯರ್ಡೂರು ರಾಮನಗರದ ಮನೆಯೊಂದಕ್ಕೆಹಾಡುಹಗಲೇ ನುಗ್ಗಿದ ಕಳ್ಳರು: ರೂ.15 ಸಾವಿರ ನಗದು, 50 ಸಾವಿರ ಮೌಲ್ಯದ ಚಿನ್ನದ ಸರ ಕಳವು

Suddi Udaya
error: Content is protected !!