September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

ಶಿಶಿಲ: ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ದಭೆ೯ತಡ್ಕ ಇದರ ಚಿತ್ಪಾವನ ಸಭಾ ಸಭಾಭವನದಲ್ಲಿ ಮೇ3ರಿಂದ ನಡೆಯುತ್ತಿದ್ದ ‘ವೇದ ಕುಸುಮ’ಶಿಬಿರವು ಮೇ 12ರಂದು ಸಂಪನ್ನಗೊಂಡಿತು.

ಶಿಶಿಲ ಸೀಮಾ ಚಿತ್ಪಾವನ ಸಮಾಜ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಶಿಬಿರದಲ್ಲಿ ಬೆಂಗಳೂರು, ಕಾಕ೯ಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಿಂದ ಸಮಾಜದ 20 ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ, ಅಥವ೯ಶೀಷ೯, ಗಣಪತಿ ಸೂಕ್ತ,ಶ್ಲೋಕಗಳು, ಪುರುಷ ಸೂಕ್ತಗಳನ್ನು ಕಲಿಸಲಾಯಿತು.

ಉಚಿತವಾಗಿ ನಡೆಸುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀವರದ ಶಂಕರ ದಾಮಲೆ ಸ್ವಾಗತಿಸಿದರು. ಗುರುಗಳಾದ ಶ್ರೀಗೋಪಾಲ ಮರಾಠೆ, ಶ್ರೇಯಸ್ ಪಾಳಂದೆ , ಅಶೋಕ ಗೋಗಟೆಯವರಿಗೆ ಗುರು ದಕ್ಷಿಣೆಯನ್ನು ಶಿಬಿರಾಥಿ೯ಗಳು ನೀಡಿ ಗೌರವಿಸಿದರು.

ಶಂಕರ ವೇದ ಪಾಠಶಾಲೆಯ ಅಂಶುಮಾನ ಅಭ್ಯಂಕಾರ್ ಸಮಯೋಚಿತವಾಗಿ ಮಾತನಾಡಿದರು. ಉದಯ ಕುಮಾರ ಅಭ್ಯಂಕಾರರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಯೋಗೀಶ ದಾಮಲೆ ನಿರೂಪಿಸಿ ವಂದಿಸಿದರು. ಶಿಬಿರಾಥಿ೯ಯವರ ಹೆತ್ತವರು ಉಪಸ್ಥಿತರಿದ್ದರು.

Related posts

ಸರಳಿಕಟ್ಟೆ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಅಲೆಕ್ಕಿ-ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಗುರುವಾಯನಕೆರೆ: ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರ ಅಧ್ಯಯನ ಪ್ರವಾಸ

Suddi Udaya

ಮಚ್ಚಿನ: ರಸ್ತೆಯಲ್ಲಿ ಹರಿದ ಮಳೆ ನೀರು; ಗ್ರಾ.ಪಂ.ನಿಂದ ಚರಂಡಿ ದುರಸ್ತಿ: ಸುದ್ದಿ ಉದಯ ಜನಧ್ವನಿ ಇಫೇಕ್ಟ್ .

Suddi Udaya

ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳಾಲು: ಮಾಚಾರು ನಿವಾಸಿ ಸುಂದರ ಮಡಿವಾಳ ನಿಧನ

Suddi Udaya
error: Content is protected !!