ಉಜಿರೆ: ಪಾರ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: ಇಲ್ಲಿಯ ಪಾರ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಜನಾರ್ಧನ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಇವರ ಮಾರ್ಗದರ್ಶನದಲ್ಲಿ ಸಭೆ ಹಾಗೂ ನೂತನ ಸಮಿತಿಯನ್ನು ರಚಿಸಲಾಯಿತು.

ಸಭೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ನೇಮೋತ್ಸವದ ಖರ್ಚು ವೆಚ್ಚ ಮಂಡನೆ ಹಾಗೂ ದೈವಗಳಿಗೆ ವಾರ್ಷಿಕ ಅಗೇಲು ಸೇವೆ ನೀಡುವ ಬಗ್ಗೆ ಚರ್ಚಿಸಲಾಯಿತು.


ಈ ವೇಳೆ ಮುಂದಿನ 3 ವರ್ಷಗಳ ಅವಧಿವರೆಗೆ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಶರತ್ ಕೃಷ್ಣ ಪಡುವೆಟ್ನಾಯ, ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಪಾರ, ಕಾರ್ಯದರ್ಶಿಯಾಗಿ ಚಂದ್ರನಾಯ್ಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ನಾಯ್ಕ ಅತ್ತಾಜೆ, ಉಪಾಧ್ಯಕ್ಷರಾಗಿ ವಾಸುಪೂಜಾರಿ ಪಾರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ತಿಮ್ಮಯ್ಯ ನಾಯ್ಕ ಪಾರ, ದೇಜಪ್ಪಪೂಜಾರಿ, ಜಯರಾಮ ನಾಯ್ಕ, ಮನು, ಜಯಂತ ನಾಯ್ಕ ಇವರನ್ನು ಆಯ್ಕೆಮಾಡಲಾಯಿತು.

Leave a Comment

error: Content is protected !!