ಉಜಿರೆ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಹಾಗೂ ಟೈಮ್ಸ್ ಪದವಿ ಪೂರ್ವ ಕಾಲೇಜು ಹಾಸನ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಬಾಲಕರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ತಂಡ ಚಾಂಪಿಯನ್ ಪಟ್ಟವನ್ನು ಪಡೆದು ಹರಿಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಸುಭಾಷ್, ಪ್ರತೀಕ್ ಶೆಟ್ಟಿ ,ವಿಕಾಸ್, ಕುಮಾರ್ ಗೌಡ, ಸೂಫಿಯನ್, ಆಫ್ರಿದಿ ಎಸ್ ಡಿ ಎಂ ಉಜಿರೆ, ಚಿನ್ಮಯಿ, ಆಕಾಶ್, ರಾಕೇಶ್.ಆಳ್ವಾಸ್ ಕಾಲೇಜು ಮೂಡಬಿದ್ರಿ. ಕೌಷಿಕ್ ಪೆರ್ನೆ ಪದವಿ ಪೂರ್ವ ಕಾಲೇಜು
ಪುನೀತ್ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಮಂಗಳೂರು, ಆಕಾಶ್ ಎಸ್ ಡಿ ಪಿ ಟಿ ಕಟೀಲು,
ಉತ್ತಮ ಹೊಡೆತಗಾರ :ಪ್ರತೀಕ್ ಶೆಟ್ಟಿ ಎಸ್ ಡಿ ಎಂ, ಉತ್ತಮ ಸವ್ಯಸಾಚಿ ವಿಕಾಸ್.ಎಸ್ ಡಿ ಎಂ
ಉತ್ತಮ ಬ್ಲಾಕರ್ ಕುಮಾರ್ ಗೌಡ ಪಡೆದುಕೊಂಡಿದ್ದಾರೆ.
ತಂಡದ ವ್ಯವಸ್ಥಾಪಕರಾಗಿ ಸಂದೇಶ್ ಪೂಂಜ ದೈಹಿಕ ಶಿಕ್ಷಣ ಉಪನ್ಯಾಸಕರು, ತಂಡದ ತರಬೇತುದಾರ ಸುಧೀನ. ಹಾಗೂ ರಮೇಶ್ ಹೆಚ್, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕರು ಇವರಿಗೆ ಶುಭ ಹಾರೈಸಿರುತ್ತಾರೆ.













