ತೆಕ್ಕಾರು- ಬಾರ್ಯ ಗಡಿಭಾಗದ ಸರಳಿಕಟ್ಟೆಯಿಂದ ಕಲ್ಲೇರಿ-ಗೋದಾಮುಗುಡ್ಡೆಯವರೆಗೆ ಸಂಪೂರ್ಣ ಹದಗೆಟ್ಟ ರಸ್ತೆ

Suddi Udaya

ತೆಕ್ಕಾರು: ತೆಕ್ಕಾರು- ಬಾರ್ಯ ಗ್ರಾಮದ ಗಡಿಭಾಗದ ಸರಳಿಕಟ್ಟೆಯಿಂದ ಕಲ್ಲೇರಿ-ಗೋದಾಮುಗುಡ್ಡೆ ರಸ್ತೆಯನ್ನು ಸಂಪರ್ಕಿಸುವ ರಸ್ತೆ( ತೋಡಿನಂತಿರುವ) ಡಾಂಬಾರು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಳೆದ ಐದು ವರ್ಷಗಳಿಂದ ಕಲ್ಲು ಮತ್ತು ಮಣ್ಣು ಹಾಕಿ ಊರವರು ಅಲ್ಪ ಸ್ವಲ್ಪ ರಿಪೇರಿ ಮಾಡುತ್ತಾ ಬರುತ್ತಿದ್ದು, ಗ್ರಾಮ ಪಂಚಾಯತಿಯಿಂದ ಹಿಡಿದು ಶಾಸಕರಿಗೆ ಹಲವಾರು ಬಾರಿ ಈ ಬಗ್ಗೆ ತಿಳಿಸಿದ್ದರೂ ಯಾರೊಬ್ಬರೂ ಇದರ ತಲೆಕೆಡಿಸಿಕೊಳ್ಳದೇ ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮವಾಗಿ ಇದೀಗ ರಸ್ತೆಯು ಗೋಂವಿದರಗುಳಿಯಿಂದ ಸರಳಿಕಟ್ಟೆಗೆ ಸಂಪರ್ಕಿಸುವ ತೋಡಿನಂತಾಗಿದ್ದು, ವಾಹನ ಸವಾರರು ಹರಸಾಹಸಪಡುತ್ತಾ ಸಂಚರಿಸುವ ದುಸ್ಥಿತಿಗೆ ತಲುಪಿದೆ.

ಈ ರಸ್ತೆಯ ದುಸ್ಥಿತಿಯ ಬಗ್ಗೆ ಈ ಭಾಗದ ರಾಜಕೀಯ ನಾಯಕರು ಅಥವಾ ಈ ಭಾಗದ ಜನರ ಪರವಾಗಿ ತೆಕ್ಕಾರು ಹಾಗೂ ಬಾರ್ಯ ಗ್ರಾಮ ಪಂಚಾಯತಿಗಳು ಜಂಟಿಯಾಗಿ ಒಕ್ಕೊರಲಿನಿಂದ ಶಾಸಕರು ಅಥವಾ ಲೋಕೊಪಯೋಗಿ ಇಲಾಖೆಯ ಗಮನಕ್ಕೆ ತಂದರೆ ಶೀಘ್ರದಲ್ಲೇ ರಸ್ತೆಯ ದುಸ್ಥಿತಿಯಿಂದ ಮುಕ್ತಿಯಾಗಬಹುದು ಎಂದು ನೊಂದ ವಾಹನ ಸವಾರರು ತಿಳಿಸಿದರು.

Leave a Comment

error: Content is protected !!