July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

ಶಿಶಿಲ: ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ, ದಭೆ೯ತಡ್ಕ ಇದರ ಚಿತ್ಪಾವನ ಸಭಾ ಸಭಾಭವನದಲ್ಲಿ ಮೇ3ರಿಂದ ನಡೆಯುತ್ತಿದ್ದ ‘ವೇದ ಕುಸುಮ’ಶಿಬಿರವು ಮೇ 12ರಂದು ಸಂಪನ್ನಗೊಂಡಿತು.

ಶಿಶಿಲ ಸೀಮಾ ಚಿತ್ಪಾವನ ಸಮಾಜ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಶಿಬಿರದಲ್ಲಿ ಬೆಂಗಳೂರು, ಕಾಕ೯ಳ, ಬೆಳ್ತಂಗಡಿ, ಪುತ್ತೂರು ತಾಲೂಕಿನಿಂದ ಸಮಾಜದ 20 ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಸಂಧ್ಯಾವಂದನೆ, ಅಥವ೯ಶೀಷ೯, ಗಣಪತಿ ಸೂಕ್ತ,ಶ್ಲೋಕಗಳು, ಪುರುಷ ಸೂಕ್ತಗಳನ್ನು ಕಲಿಸಲಾಯಿತು.

ಉಚಿತವಾಗಿ ನಡೆಸುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀವರದ ಶಂಕರ ದಾಮಲೆ ಸ್ವಾಗತಿಸಿದರು. ಗುರುಗಳಾದ ಶ್ರೀಗೋಪಾಲ ಮರಾಠೆ, ಶ್ರೇಯಸ್ ಪಾಳಂದೆ , ಅಶೋಕ ಗೋಗಟೆಯವರಿಗೆ ಗುರು ದಕ್ಷಿಣೆಯನ್ನು ಶಿಬಿರಾಥಿ೯ಗಳು ನೀಡಿ ಗೌರವಿಸಿದರು.

ಶಂಕರ ವೇದ ಪಾಠಶಾಲೆಯ ಅಂಶುಮಾನ ಅಭ್ಯಂಕಾರ್ ಸಮಯೋಚಿತವಾಗಿ ಮಾತನಾಡಿದರು. ಉದಯ ಕುಮಾರ ಅಭ್ಯಂಕಾರರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮವನ್ನು ಯೋಗೀಶ ದಾಮಲೆ ನಿರೂಪಿಸಿ ವಂದಿಸಿದರು. ಶಿಬಿರಾಥಿ೯ಯವರ ಹೆತ್ತವರು ಉಪಸ್ಥಿತರಿದ್ದರು.

Related posts

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಎಕ್ಸೆಲ್ ಟೆಕ್ನೊ ಸ್ಕೂಲ್ ವೇಣೂರಿಗೆ ಶೇ.100 ಫಲಿತಾಂಶ:ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ

Suddi Udaya

ಜು.12: ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೋನಿಕ್ ಸೌಂಡ್ ಗಳ ಉಚ್ಚಾರಣೆ ಮತ್ತು ಬಳಕೆ ಬಗ್ಗೆ ಕಾರ್ಯಾಗಾರ

Suddi Udaya

ಸೆ.7-9: ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

Suddi Udaya

ನಾವರ ನಿವಾಸಿ ಸುಂದರಿ ನಿಧನ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ತಣ್ಣೀರುಪoತ ವಲಯ ಸದಸ್ಯರಿಂದ ವಿವಿಧ ಜಾತಿಯ ಹಣ್ಣು ಹಂಪಲು ಗಿಡ ನಾಟಿ

Suddi Udaya
error: Content is protected !!