25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೃದ್ದಾಶ್ರಮ ವಾಸಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಮಾದರಿಯಾದ ನ್ಯಾಯವಾದಿ ಮುರಳಿ ಬಲಿಪ: ಎರಡು ಗೋಶಾಲೆಗಳಿಗೂ ದೇಣಿಗೆ

ಬೆಳ್ತಂಗಡಿ; ನ್ಯಾಯವಾದಿಯಾಗಿ ಮತ್ತು ನೋಟರಿ ಪಬ್ಲಿಕ್ ಆಗಿ ಬೆಳ್ತಂಗಡಿಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಮುರಳಿ ಬಲಿಪ ಅವರು ವೃದ್ದಾಶ್ರಮ ವಾಸಿಗಳ ಜೊತೆಗೆ ತನ್ನ ಹುಟ್ಟುಹಬ್ಬ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.ಜೊತೆಗೆ ಅವರು ಅಂದು ಎರಡು ಗೋಶಾಲೆಗಳಿಗೂ ದೇಣಿಗೆ ಸಮರ್ಪಿಸಿದ್ದಾರೆ.

ಹುಟ್ಟುಹಬ್ಬದ ಪ್ರಯುಕ್ತ ಬಲಿಪ ರೆಸಾರ್ಟ್ ನಲ್ಲಿ ಬೆಳ್ತಂಗಡಿ ಅನುಗ್ರಹ ವೃದ್ಧಾಶ್ರಮ ಜೊತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.ತನ್ನ ಹುಟ್ಟುಹಬ್ಬದ ದಿನವೇ ಬೆಳಗ್ಗೆ ತಾಲೂಕಿನ‌ ಗುಂಡೂರಿಯಲ್ಲಿರುವ ಗೋಶಾಲೆಗೆ ತೆರಳಿ ಜಾನುವಾರುಗಳಿಗೆ ಒಂದು ಕ್ವಿಂಟಾಲ್ ಕಲ್ಲಂಗಡಿ ಹಣ್ಣನ್ನು ಸ್ವತಃ ತಾವೇ ತಿನ್ನಿಸಿ ಖುಷಿಪಟ್ಟರು.

ಅಲ್ಲದೆ ಅಲ್ಲಿನ ಗೋಶಾಲೆಗೆ ಹಾಗೂ ತಾಲೂಕಿನ ಕಳೆಂಜ ಗ್ರಾಮದಲ್ಲಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್‌ ನವರು ಮುನ್ನಡೆಸುವ ನಂದಗೋಕುಲ ಗೋಶಾಲೆಗೆ ತಲಾ 5 ಸಾವಿರದಂತೆ ದೇಣಿಗೆ ಸಮರ್ಪಿಸಿ ವಿಶೇಷತೆ ಮೆರೆದರು. ಅವರ ಈ ಸೇವೆಗೆ ಪತ್ನಿ ಮನೋರಮಾ ಬಲಿಪ, ಇಬ್ಬರು ಪುತ್ರರಾದ ಮಯೂರ್ ಬಲಿಪ ಹಾಗೂ ಮಂದಾರ ಬಲಿಪ ಅವರು ಸಾಥ್ ನೀಡಿದರು.ವಿದೇಶಿ ಸಂಸ್ಕೃತಿ ಬೆಂಬತ್ತಿ‌ ನಾನಾ ತರದ ವಿಕೃತಿಗಳನ್ನು ಮೆರೆಯುವ ಜನರ ಮಧ್ಯೆ ಮುರಳಿ ಬಲಿಪ ಅವರು ಭಾರತೀಯತೆ ಮತ್ತು ಮಾನವೀಯತೆಗೆ ಒತ್ತು ನೀಡಿದರು.

Related posts

ಮುಂಡಾಜೆ: ಮಂಜುಶ್ರೀ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ನವರಾತ್ರಿ ಪೂಜೆ ಭಜನಾ ಕಾರ್ಯಕ್ರಮ

Suddi Udaya

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಸ್ಸಾಂ ಮುಖ್ಯಮಂತ್ರಿ ಗೌರವಾರ್ಪಣೆ

Suddi Udaya

ಧರ್ಮಸ್ಥಳ: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ವತಿಯಿಂದ ಮಕರ ಸಂಕ್ರಾಂತಿ ಆಚರಣೆ ಮತ್ತು ಅಭಿನಂದನಾ ಕಾರ್ಯಕ್ರಮ

Suddi Udaya

ತೆಕ್ಕಾರು ಗ್ರಾ.ಪಂ ಸಿಬ್ಬಂದಿ ಮೇಲೆ ಸದಸ್ಯೆಯ ತಂಡದಿಂದ ಹಲ್ಲೆ: ಎಸ್‌ಡಿಪಿಐ ತೆಕ್ಕಾರು ಗ್ರಾಮ ಸಮಿತಿ ಖಂಡನೆ

Suddi Udaya
error: Content is protected !!