April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಮಾಜಿ ಶಾಸಕ ದಿ| ಕೆ. ವಸಂತ ಬಂಗೇರರಿಗೆ ನುಡಿನಮನ

ಗುರುವಾಯನಕೆರೆ: ಐದು ಸಲ ಶಾಸಕರಾಗಿದ್ದ ವಸಂತ ಬಂಗೇರ ಕ್ಲೀನ್ ಹ್ಯಾಂಡ್. ಇದಕ್ಕಿಂತ ದೊಡ್ಡ ವಿಷಯ ಯಾವುದಿದೆ? ಇವರು ಶಾಸಕರಲ್ಲದಿದ್ದಾಗಲೂ ಶಾಸಕರೇ ಆಗಿದ್ದರು! ನ್ಯಾಯನಿಷ್ಠೆ, ಪ್ರಾಮಾಣಿಕ, ನಿಸ್ವಾರ್ಥ ಬಂಗೇರಾ ನಾಗರಿಕ ಸೇವಾ ಟ್ರಸ್ಟ್‌ನ ಕಾನೂನುಬದ್ಧವಾದ, ಪ್ರಜಾಪ್ರಭುತ್ವಕ್ಕೆ ತಕ್ಕುದಾದ ಹೋರಾಟಕ್ಕೆ ಬಲವಾಗಿ ಬೆಂಬಲವಾಗಿ ಇದ್ದರು. ಸಾರ್ವಜನಿಕ ಸೇವೆಗಾಗಿ ತನ್ನ ಭೂಮಿಗಳನ್ನೆಲ್ಲಾ ಕಳಕೊಳ್ಳುತ್ತಾ ಬಂದರೂ ಪಶ್ಚಾತಾಪವಿಲ್ಲದ ಸಾತ್ವಿಕರು. ಸೋಮನಾಥ ನಾಯಕ್‌ರು ಕೋರ್ಟ್‌ಗೆ ಸರೆಂಡರ್ ಆದಾಗ ಒಂದು ಚಾನೆಲ್‌ನ ಸಂದರ್ಶನದಲ್ಲಿ ಅವರು ಹೇಳಿದ್ದು- ಜೈಲಿಗೆ ಹಾಕಬೇಕಾದ್ದು ಸರಕಾರಿ ಅಧಿಕಾರಿಗಳನ್ನು. ಅವರು ಕೊಟ್ಟ ದಾಖಲೆಗಳನ್ನು ನಾಯಕ್‌ರು ಪ್ರಕಟಿಸಿದ್ದು. ಸತ್ಯ ಹೇಳಿದ್ರೆ ಮಾನ ಹೋಗುವುದು ಹೇಗೆ? ಎಂದು ಘರ್ಜಿಸಿದ್ರು. ಎನ್‌ಎಸ್‌ಟಿ ಕಾರ್ಯಕ್ರಮಗಳ ಹೆಚ್ಚಿನ ಸಂದರ್ಭಗಳಲ್ಲಿ ನಾನು ಅವರು ಜತೆಯಲ್ಲಿರುತ್ತಿದ್ದೆವು. ಆದರೆ ಇಂದು ಅವರು ಇಲ್ಲ. ಕೆಚ್ಚೆದೆಯ ಬಂಗೇರಾರಿಗೆ ನೂರು ನಮಸ್ಕಾರ ಎಂದು ಚಿಂತಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿಯವರು ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ಟ್ರಸ್ಟ್ ಕಚೇರಿಯಲ್ಲಿ ನಡೆದ ದಿ| ಕೆ. ವಸಂತ ಬಂಗೇರಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.


ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ರು ಮಾತಾಡುತ್ತಾ ಕುವೆಟ್ಟು ಗ್ರಾಮ ಪಂಚಾಯತ್‌ನಿಂದ ಅವರ ರಾಜಕೀಯ ಜೀವನ ಆರಂಭವಾಗಿಸಿದ ಮತ್ತು ನಂತರದ ಸುದೀರ್ಘ ಸಂಬಂಧಗಳನ್ನು ವಿವರಿಸುತ್ತಾ ಅವರು ನಮ್ಮ ಸಂಸ್ಥೆಯ ಮಾತ್ರವಲ್ಲ ಕುಟುಂಬದ ಸದಸ್ಯರಾಗಿದ್ದರು ಎಂದರು. ಶೋಷಣಾ ಸಾಮ್ರಾಜ್ಯದ ವಿರುದ್ಧ ಹೋರಾಟಕ್ಕೆ ಅವರ ಸಹಕಾರ, ಬೆಂಬಲ ಸ್ಮರಿಸುತ್ತಾ ರಾಜಕೀಯ ಕ್ಷೇತ್ರದಲ್ಲಿ ಇಂತಹ ಭ್ರಷ್ಟಾಚಾರದ ಸೋಂಕು ಇಲ್ಲದ ವ್ಯಕ್ತಿ ಇನ್ನೊಬ್ಬರಿಲ್ಲ. ಸರಕಾರಿ ಅಧಿಕಾರಿಗಳು, ಪೊಲೀಸರು, ಬಂಗೇರಾರಿಗೆ ಹೆದರಿ ನಡುಗುತ್ತಿದ್ದರು. ಅವರು ಅನ್ಯಾಯವನ್ನು ಎಂದೂ ಸಹಿಸಿದವರಲ್ಲ ಎಂದರು.


ದಲಿತರ ಭೂಹಕ್ಕೊತ್ತಾಯ ಸಮಿತಿಯ ಸಂಚಾಲಕ ಎಂ.ಬಿ. ಕರಿಯ, ಹಿಂದು ಹಿತಚಿಂತನ ವೇದಿಕೆಯ ಸಂಚಾಲಕ ಸೋಮಶೇಖರ ದೇವಸ್ಯ, ಟ್ರಸ್ಟಿಗಳಾದ ದಯಾನಂದ ಪೂಜಾರಿ ಮತ್ತು ಸದಾಶಿವ ಹೆಗ್ಡೆ, ಟ್ರಸ್ಟ್ ಉಪಾಧ್ಯಕ್ಷೆ ವಿದ್ಯಾ ಎಸ್. ನಾಯಕ್, ದಲಿತ ಅಭಿವೃದ್ಧಿ ಸಮಿತಿಯ ಸಂಚಾಲಕ ಬಾಬು ಎ., ದಲಿತ ಮುಖಂಡ ಬಾಬಿ ಮಾಲಾಡಿ, ಸುಕೇಶ್ ಕೆ., ಶೀನ ಪಿಲ್ಯ, ಕುರೈಮತ್ ಮತ್ತಿತರು ಬಂಗೇರಾರ ವ್ಯಕ್ತಿತ್ವವನ್ನು ಸ್ವಾನುಭವಗಳೊಂದಿಗೆ ವಿವರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

Related posts

ಸಂಕಷ್ಟದಲ್ಲಿರುವ ಹೆಂಚು ಉದ್ಯಮ ಸೂಕ್ತ ಪರಿಹಾರ ಕ್ರಮಕ್ಕಾಗಿ ಪರಿಷತ್ ನಲ್ಲಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಉಜಿರೆ: ರಾಜ್ಯಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್, ರೋಟರಿ ಕ್ಲಬ್ ಬೆಂಗಳೂರು ಇಂದಿರಾನಗರ ಮತ್ತು ರೋಟರಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದಿರುವ ತಾಲೂಕಿನ ಪ್ರತಿಭಾವಂತ 258 ವಿದ್ಯಾರ್ಥಿಗಳಿಗೆ ರೂ.10.32 ಲಕ್ಷ ಸ್ಕಾಲ‌ರ್ ಶಿಪ್ ವಿತರಣೆ

Suddi Udaya

ಧರ್ಮಸ್ಥಳ: ಹಲ್ಲೆ, ಜೀವ ಬೆದರಿಕೆ ಆರೋಪ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ತಾಲೂಕು ಸ್ವೀಪ್ ಸಮಿತಿ, ಮತ್ತು ಎಸ್.ಡಿ.ಎಂ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಜಂಟಿ ಆಶ್ರಯ:ಬೆಳ್ತಂಗಡಿ ಸಂತಕಟ್ಟೆ ಮತ್ತು ಬಸ್ ನಿಲ್ದಾಣದ ಬಳಿ ಮತದಾನ ಜಾಗೃತಿ ಬೀದಿ ನಾಟಕ

Suddi Udaya

ನೆರಿಯ ಕುವೆತ್ತಿಲ್ ಎಂಬಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

Suddi Udaya
error: Content is protected !!