ಪಾರೆಂಕಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿಯಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಮಡಂತ್ಯಾರು: ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರ ಸಾರಥ್ಯದಲ್ಲಿ ಭಜನಾ ತಂಡದ ಭಜಕ ವಿದ್ಯಾರ್ಥಿಗಳಿಗೆ 4ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ ರಾವ್ ಪೇಜಾವರ ಮತ್ತು ದೇವಳದ ಮಾಜಿ ಆಡಳಿತ ಮೊಕ್ತೆಸರರಾದ ವಿಠಲ್ ಶೆಟ್ಟಿ ಮೂಡಾಯೂರು, ಭಜನಾ ತಂಡದ ಗೌರವಾಧ್ಯಕ್ಷರಾದ ಯೋಗೀಶ್ ಹೆಗ್ಡೆ, ಗೌರವ ಸಲಹೆಗಾರರಾದ ಪ್ರಶಾಂತ್ ಎಮ್, ಅಧ್ಯಕ್ಷರಾದ‌ ಪ್ರವೀಣ್ ಹೆಗ್ಡೆ, ಕಾರ್ಯದರ್ಶಿ ದೀರಜ್, ಹಾಗೂ ತಂಡದ ಮಾಜಿ ಅಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಭಜನೆ, ವಿದ್ಯೆ, ಸಂಸ್ಕ್ರತಿ – ಸಂಸ್ಕಾರಗಳ ಬಗ್ಗೆ ಭಜಕರಿಗೆ ಮಾಹಿತಿ ಮತ್ತು ಸಲಹೆ ನೀಡಿದರು. ಭಜನಾ ತಂಡದ ಸರ್ವಸದಸ್ಯರ ಉಪಸ್ಥಿತಿಯಲ್ಲಿ ತಂಡದಲ್ಲಿರುವ 45ಕ್ಕೂ ಅಧಿಕ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

Leave a Comment

error: Content is protected !!