July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆ

ಬೆಳ್ತಂಗಡಿ: ಭಾರತ ರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ‌ದಿನಾಚರಣಾ ಸಮಿತಿ ಮಾಲಾಡಿ, ಇದರ ಆಶ್ರಯದಲ್ಲಿ ಬುದ್ದ, ಬಸವ, ಮತ್ತು ಅಂಬೇಡ್ಕರ್ ಜನ್ಮ‌ದಿನಾಚರಣೆಯನ್ನು‌ ಇತ್ತೀಚೆಗೆ ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಜನ್ಮದಿನಾಚರಣೆ ಸಮಿತಿಯ ಅಧ್ಯಕ್ಷ ಗಣೇಶ್ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ಬಳಿಕ‌ ಆಟೋಟ ಸ್ಪರ್ಧೆಗಳು ನಡೆದು, ಸಂಜೆ ಸಮಾರೋಪ ಸಮಾರಂಭ ನಡೆಯಿತು.. ‌ಸಮಾರೋಪದಲ್ಲಿ ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಯುವಕ‌ ಸಂಘ(ರಿ) ಕಕ್ಯೇಪದವು ಇದರ ಅಧ್ಯಕ್ಷ ರಾಜೀವ್, ಮಾಲಾಡಿ ಗ್ರಾಮ‌ ಪಂಚಾಯತ್ ನ ಅಧ್ಯಕ್ಷ ಪುನೀತ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶೇಖರ್ ಕುಕ್ಕೇಡಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ತಾಲೂಕು ಸಂಚಾಲಕರಾದ ರಮೇಶ್ ಆರ್, ಧರ್ಮಸ್ಥಳ ಗ್ರಾಮ‌ ಪಂಚಾಯತ್ ನ ಸದಸ್ಯರಾದ ಶ್ರೀಮತಿ ಸುನೀತಾ, ಪತ್ರಕರ್ತೆ ಯೋಗಿನಿ‌ ಮಚ್ಚಿನ, ಇವರುಗಳು ಭಾಗವಹಿಸಿ ಶುಭಹಾರೈಸಿದರು.‌

ಸಭಾ ಕಾರ್ಯಕ್ರಮದ ನಡುವೆ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‌ಬಾಬಿ‌ ಸ್ವಾಗತಿಸಿ, ಕೃಷ್ಣ ಪ್ರಾಸ್ತಾವಿಕವಾಗಿ‌‌ ಮಾತಾಡಿದರು.‌ ಸುಕೇಶ್ ಕೆ ನಿರೂಪಿಸಿ, ಲೋಕೇಶ್ ಧನ್ಯವಾದವಿತ್ತರು..‌

Related posts

ಮುಂಡಾಜೆ ಗ್ರಾ.ಪಂ. ಸಿಬ್ಬಂದಿ ಜನಾರ್ದನ ನಾಯ್ಕ ನಿಧನ

Suddi Udaya

ಗುರುವಾಯನಕೆರೆ-ಉಜಿರೆ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಪ್ರಯುಕ್ತ ಶೇ.40 ರಷ್ಟು ಡಿಸ್ಕೌಂಟ್ ಸೇಲ್

Suddi Udaya

ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಹಿರಿಯ ಛಾಯಾಗ್ರಹಕ ಕುಶಾಲಪ್ಪ ರೈ ರವರಿಗೆ ಗೌರವಾರ್ಪಣೆ

Suddi Udaya

ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ ತಾಲೂಕು ಹಾ.ಉ. ಕಾರ್ಯದರ್ಶಿಯವರ ವತಿಯಿಂದ ಗೌರವ ಡಾಕ್ಟರೇಟ್ ಅವಾರ್ಡ್ ಪುರಸ್ಕೃತೆ ಡಾ| ಸಾವಿತ್ರಿ ರೈ ಕೆ ರವರಿಗೆ ಸನ್ಮಾನ

Suddi Udaya

ಉಜಿರೆ ಭಜನಾ ಪರಿಷತ್ತಿನ ತಾಲೂಕು ಹಾಗೂ ವಲಯ ಪದಾಧಿಕಾರಿಗಳ ಸಭೆ

Suddi Udaya
error: Content is protected !!