23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

ಕೊಕ್ಕಡ: ಕಳೆಂಜ ಗ್ರಾಮದ ಕಾಂತ್ರೇಲು ನಿವಾಸಿ ಅರುಣ ತನ್ನ ಇಳಿ ವಯಸ್ಸಿನ ತಾಯಿ ಸುಂದರಿಯನ್ನು ಸಾಕುವ ಸಲುವಾಗಿ ಮದುವೆಯಾಗದೆ ಉಳಿದು ಕೂಲಿ ಕೆಲಸ ಮಾಡಿ ಬದುಕುತ್ತಿದ್ದು ಇತ್ತೀಚೆಗೆ ಅರುಣ ಎಂಬವರು ಕಾಯಿಲೆಗೆ ತುತ್ತಾಗಿದ್ದು ಅವರ ಚಿಕಿತ್ಸೆಗೆ 45,000/-ರೂ ಹಾಗೂ ಕಳೆಂಜ ಗ್ರಾಮದ ಶಿಬರಾಜೆ ಪಾದೆ ನಿವಾಸಿ 80 ವರ್ಷ ಪ್ರಾಯದ ಸೀತಮ್ಮ ಅನಾರೋಗ್ಯ ಪೀಡಿತರಾಗಿರುತ್ತಾರೆ. ಅವರ ಮಗಳು ಜಯಂತಿ(60 ವರ್ಷ) ಜಾರಿ ಬಿದ್ದು ಕಾಲಿನ ಶಸ್ತ್ರಕ್ರಿಯೆಗೆ ಒಳಪಟ್ಟು ಮನೆಯಲ್ಲಿರುತ್ತಾರೆ. ಜಯಂತಿ ಯವರ ಮಗ ಅಶ್ವತ್ ಮರದಿಂದ ಬಿದ್ದು ಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿ ಮನೆಯಲ್ಲಿರುತ್ತಾರೆ, ಇವರ ಚಿಕಿತ್ಸೆಗೆ 30.000/-ರೂ ಮೊತ್ತದ ಹಣವನ್ನು ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರು ಸಂಘದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ ಸಂಗ್ರಹಿಸಿ ಹಸ್ತಾಂತರಿಸಿದರು.

Related posts

ಪುದುವೆಟ್ಟು: ಪತ್ರಕರ್ತ ಭುವನೇಂದ್ರ ನಿಧನ

Suddi Udaya

ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ 79ನೇ ಸ್ವಾತಂತ್ರ ದಿನಾಚರಣೆ

Suddi Udaya

ಸೆ.23: ಮಡಂತ್ಯಾರು ಪ್ರಾ.ಕೃ.ಪ.ಸ. ಸಂಘದ 50 ರ ಸುವರ್ಣ ಮಹೋತ್ಸವ ಸಂಭ್ರಮ: ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಇದರ ಉದ್ಘಾಟನಾ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ‌ ಶುಭ ಹಾರೈಸಿದ ಸಹಕಾರ ರತ್ನ ಡಾ‌. ಎಂ.ಎನ್ ರಾಜೇಂದ್ರ ಕುಮಾರ್

Suddi Udaya

ಬಂದಾರು ಚಂದ್ರಹಾಸ ಕುಂಬಾರರವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ

Suddi Udaya

ಎ.30: ಉಪ್ಪಾರಪಳಿಕೆಯಲ್ಲಿ ಶ್ರೀಕೃಷ್ಣ ಭಜನಾ ಮಂದಿರದ ಪ್ರಾರಂಭೋತ್ಸವ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

Suddi Udaya
error: Content is protected !!