ಕಾಪಿನಡ್ಕ: ರಸ್ತೆ ಅಪಘಾತದಲ್ಲಿ ದೊಡ್ಡ ದುರಂತವನ್ನು ತಪ್ಪಿಸಿದ ಟಿಪ್ಪರ್ ಚಾಲಕ,

Suddi Udaya

ಕಾಪಿನಡ್ಕ:ಕಾಪಿನಡ್ಕ ಸೇತುವೆ ಬಳಿ ಟಿಪ್ಪರ್ ಮತ್ತು ಕಾರ್ ನಡುವೆ ರಸ್ತೆ ಅಪಘಾತ ಸಂಭವಿಸುವ ದೊಡ್ಡ ದುರಂತವನ್ನು ಟಿಪ್ಪರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ.

ಸೇತುವೆಯ ಕೆಳಗಿನ‌ ಇಕ್ಕಟ್ಟಾದ ರಸ್ತೆಯಿಂದ ಕಾರೊಂದು ಮುಖ್ಯ ರಸ್ತೆಗೆ ಬರುತ್ತಿದ್ದಾಗ ಅಳದಂಗಡಿ ಕಡೆಯಿಂದ ಅಶೋಕ್ ಲೈಲ್ಯಾಂಡ್ 10 ವೀಲ್ ಟಿಪ್ಪರ್ ಲೋಡ್ ಗಾಡಿ ಬೆಳ್ತಂಗಡಿ ಕಡೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಕಾರ್ ಡಿಕ್ಕಿಯಾಗುವುದನ್ನು ತಪ್ಪಿಸುವಾಗ ಟಿಪ್ಪರ್ ರಸ್ತೆಯ ಸೈಡ್ ಗೆ ಎಳೆಯಲ್ಪಟ್ಟು ನಿಂತಿದೆ. ಒಂದು ವೇಳೆ ಟಿಪ್ಪರ್ ನಿಲ್ಲದಿದ್ದರೆ ಕೆಳಗೆ ದೊಡ್ಡ ಗುಂಡಿ ಹಾಗೂ ಲೈಟ್ ಕಂಬಗಳಿದ್ದವು‌.ಈ ವೇಳೆ ಗುಂಡಿಗೆ ಬೀಳುತ್ತಿದ್ದರೆ ದೊಡ್ಡ ದುರುಂತ ಸಂಭವಿಸುತ್ತಿತ್ತು. ದೇವರ ದಯದಿಂದ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.. ಟಿಪ್ಪರನ್ನು ಮೇಲೆತ್ತುವ ಕಾರ್ಯ ನಡೆಯುತ್ತಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Leave a Comment

error: Content is protected !!