ಗ್ರಾಮಾಂತರ ಸುದ್ದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಸೆ.16: ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ

ಬೆಳ್ತಂಗಡಿ: ವಿಶ್ವಕರ್ಮಾಭ್ಯುದಯ ಸಭಾ (ರಿ.), ಲಾಯಿಲ, ಬೆಳ್ತಂಗಡಿ ಮತ್ತು ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ, ಲಾಯಿಲ, ಬೆಳ್ತಂಗಡಿ ಇದರ ವತಿಯಿಂದ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆಯು ಶಿವಪ್ರಸಾದ್ ಪುರೋಹಿತ್ ಸವಣಾಲು ಇವರ ಪೌರೋಹಿತ್ಯದಲ್ಲಿ ಸೆ.16ರಂದು ಪೂರ್ವಾಹ್ನ 8:30ರಿಂದ ಲ್ಯಾಲ ವಿಶ್ವಕರ್ಮ ಸಭಾಭವನದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರುಗಲಿರುವುದು ಎಂದು ಸಂಘದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್. ಗುಂಪಲಾಜೆ ಹಾಗೂ ಸಂಘಟಕರು ತಿಳಿಸಿರುತ್ತಾರೆ.

ಪೂರ್ವಾಹ್ನ ಧಾರ್ಮಿಕ ಸಭೆ ನಡೆಯಲಿದ್ದು ಸಭಾಧ್ಯಕ್ಷತೆಯನ್ನು ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಇದರ ಅಧ್ಯಕ್ಷ ಗಣೇಶ್ ಆಚಾರ್ಯ, ಬಲ್ಯಾಯಕೋಡಿ ವಹಿಸಲಿರುವರು. ಉಡುಪಿ & ದ.ಕ. ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಇಂಜಿನಿಯರಿಂಗ್ ಕ್ಷೇತ್ರದ ಪ್ರತಿನಿಧಿ ಹರ್ಷ ವರ್ಧನ್ ನಿಟ್ಟೆ ಧಾರ್ಮಿಕ ಉಪನ್ಯಾಸವನ್ನು ನೆರವೇರಿಸಲಿರುವರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ ಸಿಂಹ ನಾಯಕ್, ಧಾರ್ಮಿಕ ಮುಖಂಡ ಕಿರಣ್‌ಂದ್ರ ಡಿ. ಪುಷ್ಪಗಿರಿ, ಉದ್ಯಮಿ, ಚಲನಚಿತ್ರ ನಟ, ಕಾರುಣ್ಯ ಸೇತು ಟ್ರಸ್ಟ್ ಸಂಸ್ಥಾಪಕ ಸ್ವಸ್ತಿಕ್ ಆರ್ಯ, ಗುರುವಾಯನಕೆರೆ ಶ್ರೀಕೃಷ್ಣ ಎಂಟರ್‌ಪ್ರೈಸಸ್ ನ ವಾಮನ ಆಚಾರ್ಯ, ಶ್ರೀಮತಿ ಸರಸ್ವತಿ ನಿರಂಜನ್ ಆಚಾರ್ಯ ಕೈಪ್ಲೋಡಿ ನಿವೃತ್ತ ಸರಕಾರಿ ನೌಕರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬೆಳ್ತಂಗಡಿ, ಎ ಬಾಲಕೃಷ್ಣ ಆಚಾರ್ಯ ಅಧ್ಯಕ್ಷರು ವಿಶ್ವಕರ್ಮ ಮಿತ್ರರು, ಎಂ. ಆರ್. ಪಿ. ಎಲ್. ಮಂಗಳೂರು, ಸುರೇಂದ್ರ ಆಚಾರ್ಯ ಕನ್ನಾಜೆ ಯುವ ಉದ್ಯಮಿಗಳು, ಸಿಲಿಕಾನ್ ಮೋಟಾರ್ಸ್, ಬೆಂಗಳೂರು, ಭಾಗವಹಿಸಲಿರುವರು. ಪಿ.ಎನ್. ರಮೇಶ್ ಆಚಾರ್ಯ, ಮದ್ದಡ್ಕ ಗೌರವ ಸಲಹೆಗಾರರು, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘ, ಬೆಳ್ತಂಗಡಿ, ಶ್ರೀಮತಿ ಉಷಾ ಹರಿಪ್ರಸಾದ್ ಅಧ್ಯಕ್ಷರು, ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ, ಬೆಳ್ತಂಗಡಿ ಗೌರವ ಉಪಸ್ಥಿತರಿರುವರು.

ಮಧ್ಯಾಹ್ನ 2ರಿಂದ “ವಿ.ಎಸ್.ಡಿ ಶೋ ಮಾಸ್ಟರ್ಸ್ ಉಜಿರೆ” ಮತ್ತು “ಸ್ವರ ಮಾಧುರ್ಯ ಬೆಳ್ತಂಗಡಿ” ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು. 3ರಿಂದ ವಿಶ್ವಕರ್ಮ ಯುವ ಕಲಾವಿದರ ಕೂಡುವಳಿಕೆಯಲ್ಲಿ “ಪಾಂಡವಾಶ್ವಮೇಧಾ”ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ, ಚೆಂಡೆಯಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮದ್ದಳೆಯಲ್ಲಿ ಪೂಜಾ ಆಚಾರ್ಯ ಶಿರ್ತಾಡಿ, ಚಕ್ರತಾಳ ಶ್ರೇಯಸ್ ಆಚಾರ್ಯ ವಾಮದಪದವು, ಮುಮ್ಮೇಳದಲ್ಲಿ ಪ್ರಸಿದ್ಧ ಯುವ ಕಲಾವಿದರು ಭಾಗವಹಿಸಲಿರುವರು.

Related posts

ಇಂದಬೆಟ್ಟು: ಗಂಗಾಧರ್ ಎಸ್. ರವರ ತೋಟದಲ್ಲಿ ಬೃಹತಾಕಾರದ ಹೆಬ್ಬಾವು ಪತ್ತೆ

Suddi Udaya

ನಾಳ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಪ್ಪರ ಮುಹೂರ್ತ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆ ಪ್ರಮೋದ್ ಗೌಡ ರವರ ಚಿಕಿತ್ಸಾ ನೆರವಿಗೆ ಮನವಿ

Suddi Udaya

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ರೂ‌ 1.50 ಕೋಟಿ ಬೆಲೆಯ ಬಿಳಿ ಬಣ್ಣದ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರು

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya
error: Content is protected !!