July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ: ವೇಣೂರು ಆರಕ್ಷಕ ಠಾಣೆಯ ವತಿಯಿಂದ ಬೀಟ್ ಪೋಲೀಸ್ ಪಂಪಾಪತಿಯವರಿಂದ ಸಾರ್ವಜನಿಕರಿಗೆ ಸೈಬರ್ ಕ್ರೈಂ ,ಸಂಚಾರ ನಿಯಮ ಪಾಲನೆ ಹಾಗೂ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿ

ಬಳಂಜ: ವೇಣೂರು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀಶೈಲ್ ಡಿ ಮುರಗೋಡ್ ರವರ ಮಾರ್ಗದರ್ಶನದಂತೆ ಬಳಂಜ, ನಾಲ್ಕೂರು, ತೆಂಕಕಾರಂದೂರು, ಕರಂಬಾರು, ಶಿರ್ಲಾಲು ಗ್ರಾಮಗಳ ಬೀಟ್ ಪೊಲೀಸ್ ಎಚ್.ಸಿ ಬಿ.ಪಂಪಾಪತಿ ಬೀಟ್ ಸಭೆ ಮಾಡಿ ಸಾರ್ವಜನಿಕರಿಗೆ ಸೈಬರ್ ಕ್ರೈಂ ಸಂಚಾರ ನಿಯಮ ಪಾಲನೆ ಹಾಗೂ ಇತ್ತೀಚಿನ ದಿನಮಾನಗಳಲ್ಲಿ ಕಳ್ಳತನ ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಮಾಹಿತಿಯನ್ನು ಬಳಂಜ ಶ್ರೀದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.

ಸಾರ್ವಜನಿಕರು ಪ್ರಸ್ತುತ ಮಳೆಗಾಲವಾಗಿರುವುದರಿಂದ ರಾತ್ರಿ ವೇಳೆ ಮಳೆ ಬೀಳುತ್ತಿರುವ ಸಮಯ ಮಳೆ ಶಬ್ದಕ್ಕೆ ಮನೆಯ ಬಾಗಿಲು ಹೊಡೆದು ಕಳ್ಳತನ ಮಾಡುವ ತಂತ್ರಗಾರಿಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ತಮ್ಮ ಬೆಲೆಬಾಳುವ ಒಡವೆ /ಹಣವನ್ನು ಅಗತ್ಯಕಿಂತ ಹೆಚ್ಚು ಮನೆಯಲ್ಲಿ ಇಟ್ಟುಕೊಳ್ಳದೆ ಬ್ಯಾಂಕ್ /ಸೇಫರ್ ಲಾಕ್ ನಲ್ಲಿ ಇಡುವುದು ಉತ್ತಮ. ಸಾರ್ವಜನಿಕರು ತಮ್ಮ ಸಂಬಂಧಿಕರ ಮನೆಗೆ ತೆರಳುವಾಗ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ ಮನೆ ಕಡೆ ಗಮನಿಸುವಂತೆ ತಿಳಿಸಿ ತೆರಳುವುದು ಉತ್ತಮ. ಮನೆಯಲ್ಲಿ ಬೆಲೆಬಾಳುವ ವಸ್ತು / ಒಡವೆಗಳು ಇಟ್ಟುಕೊಂಡವರು ಮನೆಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವುದು, ಮನೆಯ ಹೊರಾಂಗಣದಲ್ಲಿ ರಾತ್ರಿವೇಳೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇರುವಂತೆ ಮಾಡುವುದು. ಮನೆಯಲ್ಲಿ ನಾಯಿ ಸಾಕಿರುವವರು ರಾತ್ರಿವೇಳೆ ಹೊರಗಡೆ ನಾಯಿಗಳನ್ನು ಕಟ್ಟಿಹಾಕದೆ ಹೊರಗಡೆ ಬಿಡುವುದು ಒಳ್ಳೆಯದು. ಸಾರ್ವಜನಿಕರು ತಮ್ಮ ಮನೆ ಆಸುಪಾಸು ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುವ ಬಗ್ಗೆ /ವ್ಯಾಪಾರಕ್ಕೆ ಬರುವವರ ಬಗ್ಗೆ ಗಮನಿಸುವುದು ಅಗತ್ಯವಿದ್ದಲ್ಲಿ ಪೊಲೀಸ್ ಠಾಣೆಗೆ /112 ಗೆ ಕರೆಮಾಡಿ ತಿಳಿಸಿ. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಪೋಲೀಸರ ಸಹಾಯ ಬೇಕಾದಲ್ಲಿ ತುರ್ತು ಪೊಲೀಸ್ ಸೇವೆ 112 ಗೆ ಕರೆಮಾಡುವುದು. ನಮ್ಮ ಅಮೂಲ್ಯವಾದ ವಸ್ತುಗಳನ್ನು ಕಳೆದುಕೊಳ್ಳುವ ಮುನ್ನ ಜಾಗರೂಕರಾಗೋಣ .ಮನೆಗಳಲ್ಲಿ ಜನ ಇರುವಾಗಲೇ ಮನೆ ಬಾಗಿಲು ಹೊಡೆದು ಕಳ್ಳತನ ಮಾಡುವ ಗ್ಯಾಂಗ್ ಸಂಚರಿಸುತ್ತಿದೆ ಎಚ್ಚರಿಕೆ ವಹಿಸಿ ಅದುಲ್ಲದೆ ಆನ್ಲೈನ್ ವಂಚನೆ ಆದಲ್ಲಿ ಸಾರ್ವಜನಿಕರು 1 ಗಂಟೆ ಒಳಗಾಗಿ ಟೋಲ್ ಫ್ರೀ ನಂಬರ್ 1930 ಗೆ ಕರೆ ಮಾಡಿ ದೂರು ದಾಖಲಿಸುವುದು ಹಾಗೂ ನಿಮ್ಮ ಮೊಬೈಲ್ ಗಳಿಗೆ ಬರುವ ಬ್ಲಾಂಕ್ ಮೆಸೇಜ್ ಓಪನ್ ಮಾಡದೆ ಡಿಲೀಟ್ ಮಾಡುವುದು ಎಂಬುದಾಗಿ ಬೀಟ್ ಅಡಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Related posts

ಶ್ರೀ ಧ.ಮಂ ಪ.ಪೂ ಕಾಲೇಜು : ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

Suddi Udaya

ಮನೆಯಿಂದ ಪೇಟೆಗೆ ಹೋಗುತ್ತೇನೆಂದು ‌ಹೇಳಿ ಹೋದ‌ ತೋಟತ್ತಾಡಿಯ ವ್ಯಕ್ತಿಯ ಶವ ಉಜಿರೆ ರಸ್ತೆ ಬದಿಯಲ್ಲಿ ಪತ್ತೆ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮೂವರು ಆರೋಪಿಗಳ ಬಂಧನ

Suddi Udaya

ದೀಕ್ಷಾನ್ವಯ : ಎಸ್.ಡಿ.ಎಂ. ಬಿ.ಎಡ್ ಕಾಲೇಜಿನ ಪ್ರಾರಂಭೋತ್ಸವ

Suddi Udaya

ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಶ್ರೀ ರಾಮ ಕ್ಷೇತ್ರದಲ್ಲಿ ಬಳಂಜ ಸಂಘದಿಂದ ಶ್ರೀ ರಾಮತಾರಕ ಮಂತ್ರ

Suddi Udaya
error: Content is protected !!