July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ

ಉಜಿರೆ :, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ), ಇಲ್ಲಿ “ವಿಶ್ವ ಪರಿಸರ ದಿನ ” ವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಾಮ ಕುಮಾರ್ ಕೃಷಿ ಅಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ ಮಾಭಿವೃದ್ಧಿ ಯೋಜನೆ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು, ಅಲ್ಲದೇ ಹೊನ್ನಪ್ಪ ಗೌಡ, ಮಳೆ ಕೊಯ್ಲು ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಶ್ರೀಮತಿ ಚೈತ್ರ , ಅರಿವು ಕೃಷಿ ಕ್ಲಿನಿಕ್ ಇವರು ಉಪಸ್ಥಿತಿ ಇದ್ದರು.


ಮುಖ್ಯ ಅತಿಥಿಗಳಾದ ಶ್ರೀರಾಮ್ ಕುಮಾರ್ ಇವರು ಮಳೆ ನೀರನ್ನು ಇಂಗಿಸುವ ಉದ್ದೇಶ, ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು, ಅಲ್ಲದೆ ಮಕ್ಕಳಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಅತಿಥಿಗಳಾದ ಹೊನ್ನಪ್ಪ ಗೌಡ ಇವರು ಮಾತನಾಡುತ್ತಾ ಮಳೆ ನೀರಿನ ಕೊಯ್ಲಿನ ಬಗ್ಗೆ ವಿಸ್ತಾರವಾಗಿ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿಯಾದ ವಿದ್ಯಾಲಕ್ಷ್ಮಿ ನಾಯಕ್ ಇವರು ಮಕ್ಕಳನ್ನು ಕುರಿತು ಮಾತನಾಡಿ ನೀರು ಇಂಗಿಸುವಲ್ಲಿ ಮಕ್ಕಳ ಪಾತ್ರವನ್ನು ತಿಳಿಹೇಳಿದರು.

ಮಕ್ಕಳು ಶಾಲೆಯಲ್ಲಿ ವಿಶ್ವ ಪರಿಸರ ದಿನದ ಆಚರಣೆಯಲ್ಲಿ ಭಾಗವಹಿಸಿ ಸೃಜನಾತ್ಮಕವಾಗಿ ತಯಾರಿಸಿದಂತಹ ಸೀಡ್ ಬಾಲ್ ಮತ್ತು ಕೋಕೆದಾಮವನ್ನು ಪ್ರದರ್ಶಿಸಲಾಯಿತು.

“ಮಳೆನೀರಿನ ಕೊಯ್ಲು ಪ್ರಾತ್ಯಾಕ್ಷಿತೆ” ಯು ಗಮನಾರ್ಹವಾಗಿದ್ದು, ಮಕ್ಕಳು ಕುತೂಹಲದಿಂದ ವೀಕ್ಷಿಸಿದರು. ಹತ್ತನೇ ತರಗತಿಯ ಮಧುಶ್ರೀ ಮತ್ತು ಅದಿಶ್ ಕಾರ್ಯಕ್ರಮದ ನಿರೂಪಿಸಿದರು . ಎಂಟನೇ ತರಗತಿಯ ಮನಸ್ವಿ, ವಿಶ್ವ ಪರಿಸರ ದಿನದ ಮಹತ್ವವನ್ನು ನುಡಿದರು. ಶ್ರೇಯ ಸ್ವಾಗತಿಸಿ ದೀಪಿಕಾ ವಂದಿಸಿದರು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶಸ್ವಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆ

Suddi Udaya

ವೇಣೂರು ವಿದ್ಯಾನಗರ ಬಳಿ ಲೂಯಿಸ್ ರವರ ಮನೆಯ ಕಾಂಪೌಂಡ್ ಕುಸಿತ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ವೇಣೂರು ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಪವನ್ ರವರ ಚಿಕಿತ್ಸೆಗೆ ನೆರವು

Suddi Udaya

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ‌ಯವರನ್ನು ಭೇಟಿ ಮಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ:ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳ ಕುರಿತು ಚರ್ಚೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಆರಿಕೋಡಿಯ ಧರ್ಮದರ್ಶಿ ಹರೀಶ್ ಗೌಡರಿಂದ ರಂಗಪೂಜೆ

Suddi Udaya
error: Content is protected !!