April 2, 2025
ಗ್ರಾಮಾಂತರ ಸುದ್ದಿ

“ಸುರ್ಯ ದೇವಸ್ಥಾನದ ವಠಾರದಲ್ಲಿ “ವಿಶ್ವ ಪರಿಸರ ದಿನಾಚರಣೆ “

ಬೆಳ್ತಂಗಡಿ:ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಸದಾಶಿವರುದ್ರ ದೇವಸ್ಥಾನದ ವಠಾರದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ ವಲಯ ಹಾಗೂ ಸುರ್ಯ ದೇವಸ್ಥಾನದ ಆಶ್ರಯದಲ್ಲಿ “ವಿಶ್ವ ಪರಿಸರ ದಿನ ” ಆಚರಿಸಲಾಯಿತು. ಸುರ್ಯ ದೇವಸ್ಥಾನದ ಆನುವಂಶಿಯ ಆಡಳಿತ ಮೊಕ್ತೇಸರ ಡಾ. ಸತೀಶ್ಚಂದ್ರ ಸುರ್ಯಗುತ್ತು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಸತೀಶ್ಚಂದ್ರ ಹಾಗೂ ವಿದ್ಯಾ. ಪಿ. ಡಿ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ (ಸಾಮಾಜಿಕ ಅರಣ್ಯ ಇಲಾಖೆ ) ಇವರು ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಅರಣ್ಯಕರಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅರಣ್ಯಧಿಕಾರಿ ಅಶೋಕ್, ಇಲಾಖೆ ಸಿಬ್ಬಂದಿ ಶೇಖರ ಗೌಡ, ನಡ ಪಂಚಾಯತ್ ಮಾಜಿ ಅಧ್ಯಕ್ಷ ಮುನಿರಾಜ ಅಜ್ರಿ, ಪ್ರಸಾದ್, ಸುಂದರ ನಾಯ್ಕ, ಪದ್ಮನಾಭ ಗೌಡ, ಯೋಗೀಶ್ ಪೂಜಾರಿ ಹಾಜರಿದ್ದರು. ಮಾವು, ಹೆಬ್ಬಲಸು, ಸಂಪಿಗೆ, ನೇರಳೆ, ಶ್ರೀಗಂಧ, ಸೊರಗೆ , ಹೊಳೆ ದಾಸವಾಳ ಇತ್ಯಾದಿ ವಿವಿಧ ಬಗೆಯ ನೂರು ಗಿಡಗಳನ್ನು ಸುರ್ಯ ದೇವಸ್ಥಾನದ ವಠಾರದಲ್ಲಿ ನೆಡಲಾಯಿತು.

Related posts

ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕೆ.ವಿ ಪ್ರಸಾದ್ ಇಲಂತಿಲ ರವರು ಬಿಜೆಪಿ ಮುಂದಿನ 6ವರ್ಷಗಳ ಅವಧಿಗೆ ಸದಸ್ಯತ್ವ ಹಾಗೂ ಇತರ ಎಲ್ಲಾ ಜವಾಬ್ದಾರಿಗಳಿಂದ ವಜಾ

Suddi Udaya

ನಾಳ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಶ್ರಮದಾನ

Suddi Udaya

ನೆರಿಯದಲ್ಲಿ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಒತ್ತಾಯ: ಗ್ರಾಮ ಪಂಚಾಯಿತಿ ಎದುರು ರಾತ್ರಿ ತನಕ ಪ್ರತಿಭಟನೆ

Suddi Udaya

ತಾಲೂಕಿನ ಅಭಿವೃದ್ದಿಯಲ್ಲಿ ಭ್ರಷ್ಟಾಚಾರ, ಸ್ಜಜನಪಕ್ಷಪಾತಕ್ಕೆ ಅವಕಾಶವಿಲ್ಲ- ರಕ್ಷಿತ್ ಶಿವರಾಂ ಭರವಸೆ

Suddi Udaya

ಕಳಿಯ : ಧಾರಕಾರ ಮಳೆಗೆ ಮನೆಯ ತಡೆ ಗೋಡೆ ಕುಸಿತ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya
error: Content is protected !!