ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕ್ರಿಟಿಕಲ್ ಫಂಡ್ ಚೆಕ್ ವಿತರಣೆ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಲಾಯಿಲ ವಲಯದ ಮಲೆಬೆಟ್ಟು ಕಾರ್ಯಕ್ಷೇತ್ರದ ಯಶೋಧರ ಗೌಡ ರವರ ಬೆಂಕಿಯಿಂದ ತನ್ನ ದೇಹದ ಸ್ವಲ್ಪ ಭಾಗ ಸುಟ್ಟು ಹೋಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚ ರೂ. 15,000/ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗೆಯವರು ವಿಶೇಷವಾಗಿ ಮಂಜೂರಾತಿಯನ್ನು ಮಾಡಿದ್ದು ಈ ಮೊತ್ತದ ಚೆಕ್ ನ್ನು ಮಲೆಬೆಟ್ಟು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರವೀಣ್ ರವರು ಸದಸ್ಯರ ಮನೆಯಲ್ಲಿ ಹಸ್ತಾಂತರಿಸಿದರು,

ಈ ಸಂದರ್ಭ ಬೆಳ್ತಂಗಡಿ ತಾಲೂಕಿನ SKDRDP ಮ್ಯಾನೇಜರ್ ರತನ್ ಕುಮಾರ್, ಒಕ್ಕೂಟದ ಪದಾಧಿಕಾರಿಯಾದ ತೇಜವತಿ, ಉಮೇಶ ಗೌಡ, ಸೇವಾಪ್ರತಿನಿಧಿ ಲೀಲಾ, ವಲಯ ಮೇಲ್ವಿಚಾರಕರಾದ ಸುಶಾಂತ್, ಉಪಸ್ಥಿತರಿದ್ದರು.

Leave a Comment

error: Content is protected !!