April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗೆ ರೂ.91ಲಕ್ಷ ಕೊರತೆ : ಶಾಸಕ ಹರೀಶ್ ಪೂಂಜರವರು ರೂ.1 ಕೋಟಿ 5 ಲಕ್ಷ ಅನುದಾನ ನೀಡಿದ್ದು ದೇಗುಲದ ಅಭಿವೃದ್ಧಿಗೆ ಬಳಕೆಯಾಗಿದೆ: ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು : ಪುರುಷೋತ್ತಮ ರಾವ್

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯಲ್ಲಿ ಹಣಕಾಸಿನ ಕೊರತೆಯಾಗಿದ್ದು ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು ಎಂದು ಪುರುಷೋತ್ತಮ ರಾವ್ ಹೇಳಿದರು.ಅವರು ಜೂ.13ರಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ 2023ರ ಫೆ.19ರಿಂದ 27 ರವರೆಗೆ ಬಹಳ ವಿಜೃಂಭಣೆಯಿಂದ ಜರಗಿರುತ್ತದೆ. ಸರಕಾರದಿಂದ ಶಾಸಕ ಹರೀಶ್ ಪೂಂಜರವರು 1 ಕೋಟಿ 5 ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿ ದೇವಾಲಯದ ಜೀರ್ಣೋದ್ಧಾರ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಹಾಗೂ ಇನ್ನುಳಿದ ಜೀರ್ಣೋದ್ದಾರದ ಕೆಲಸಗಳಿಗೆ ನಾನು ರೂ 35 ಲಕ್ಷ ಹಾಗೂ ಪ್ರಶಾಂತ ಹೆಗ್ಡೆ ಕುಂಟಲ್ಮಾರ್ 19 ಲಕ್ಷ ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಪಡೆದು ಜೀರ್ಣೋದ್ದಾರ ಸಮಿತಿಯ ಖಾತೆಗೆ ಜಮಾಗೊಳಿಸಿ ಕಾಮಗಾರಿ ಮುಂದುವರಿಸಿದೆವು.ಕಾಮಗಾರಿ ಮುಕ್ತಾಯಕ್ಕೆ ಪೂರಕವಾಗಿ ಮಾಡಿಕೊಂಡ ಸಾಲಗಳ ಪೈಕಿ ಪ್ರಶಾಂತ ಹೆಗ್ಡೆ ಯವರ ರೂ.19 ಲಕ್ಷಗಳನ್ನು ಸಮಿತಿಯಿಂದ ಹಿಂಪಾವತಿಸಲಾಗಿಯಿತು.2014 ರಿಂದ ಈವರೆಗೆ ಆದ ಕಾಮಗಾರಿಗಳಿಗೆ ರೂಪಾಯಿ 6.65 ಕೋಟಿ ಗಳಷ್ಟು ದೇಣಿಗೆ ಸಂಗ್ರಹವಾಗಿ 7.56 ಕೋಟಿ ಖರ್ಚಾಗಿದ್ದು, ಸುಮಾರು 91 ಲಕ್ಷದ ಕೊರತೆ ಆಗಿರುತ್ತದೆ. ವೈಯಕ್ತಿಕ ಸಾಲಗಳ ಮರು ಪಾವತಿಗೆ ಹಾಗೂ ಕಾಮಗಾರಿ ಮಾಡಿದವರಿಗೆ ಪಾವತಿ ಮಾಡುವಲ್ಲಿ ಈಗಾಗಲೇ ಬಹಳ ವಿಳಂಬ ಆಗಿರುತ್ತದೆ.ದೇವಾಲಯ ಸಂಪೂರ್ಣ ಋಣ ಮುಕ್ತವಾಬೇಕು ಈ ನಿಟ್ಟಿನಲ್ಲಿ ಭಕ್ತಾದಿಗಳೆಲ್ಲರೂ ಕೈಲಾದಷ್ಟು ಧನಸಹಾಯವನ್ನು ದೇವಾಲಯಕ್ಕೆ ನೀಡಬೇಕು. ದೇವಾಲಯದ ಆಡಳಿತಾಧಿಕಾರಿಗಳೂ ಅಥವಾ ಮುಂದಿನ ವ್ಯವಸ್ಥಾಪನ ಸಮಿತಿಯವರು ಹಣ ಆದಷ್ಟು ಕ್ರೋಢೀಕರಿಸಿ, ದೇವಾಲಯ ಋಣಮುಕ್ತಗೊಳ್ಳುವವರೆಗೆ ಹೊಸ ಯೋಜನೆಗಳನ್ನು ಮುಂದೂಡಿ ಸಹಕರಿಸಬೇಕಾಗಿ ವಿನಂತಿಸಿಕೊಂಡರು. ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ ಸಂಗ್ರಹ ಆದ ಮೊತ್ತ ವನ್ನು ಬ್ಯಾಂಕ್‌ ಸಾಲಕ್ಕೆ ಕಂತು ಪಾವತಿಸಲು ಮಾರ್ಚ್ ತಿಂಗಳ ಕೊನೆಗೆ ಕಚೇರಿಯಿಂದ ಚೆಕ್ ಪುಸ್ತಕ ಪಡೆಯಲು ಹೋದಾಗ ಆಡಳಿತಾಧಿಕಾರಿ ಚೆಕ್ ಪುಸ್ತಕ ನೀಡಲು ನಿರಾಕರಿಸಿರುವುದರಿಂದ ಕಂತು ಭರಿಸಲು ಉಳಿದಿದೆ. ಮುಂದೆ ಹೆಚ್ಚುವರಿ ಬಡ್ಡಿಯನ್ನು ಭರಿಸ ಬೇಕಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್, ಗ್ರಾಮ ಸಮಿತಿ ಸಂಚಾಲಕ ಉಮೇಶ್ ,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸುಂದರ ಹೆಗ್ಡೆ , ಸದಸ್ಯರಾದ ಪ್ರಶಾಂತ್ ಹೆಗ್ಡೆ , ಚಂಪಾ, ಯಶೋಧ, ಅಣ್ಣು ಮೂಲ್ಯ, ಕಾರ್ತೀಕ್ ನಿಟ್ಟಡೆ , ಸತೀಶ್ ಕೆರಿಯಾರ್ ಉಪಸ್ಥಿತರಿದ್ದರು.

Related posts

ಕುವೆಟ್ಟು : ಪಯ್ಯೊಟ್ಟು ನಿವಾಸಿ ಸೀತಾರಾಮ ಪೂಜಾರಿ ನಿಧನ

Suddi Udaya

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಸಾಂಸ್ಕೃತಿಕ ವೈಭವ

Suddi Udaya

ಬಳಂಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಗಣೇಶೋತ್ಸವಕ್ಕೆ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬ್ಯಾನರ್

Suddi Udaya

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮದಲ್ಲಿ ಸಮಾಜ ಸೇವಕ ಯಶೋಧರ ಶೆಟ್ಟಿ ಬಳಂಜರವರಿಗೆ ಸನ್ಮಾನ

Suddi Udaya
error: Content is protected !!