24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ ಶ್ರೀವಿದ್ಯಾ ಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರದ ಕುಟೀರ ಉದ್ಘಾಟನೆ

ಸುಲ್ಕೇರಿ: ಶ್ರೀರಾಮ ಶಿಶುಮಂದಿರದ ನೂತನ ಕುಟೀರ ಉದ್ಘಾಟನೆ ಮತ್ತು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.


ಎಲ್ಲಾ ಪೂಜಾ ವಿಧಿವಿಧಾನಗಳ ನಂತರ ಶಿಶುಮಂದಿರದ ನೂತನ ಕುಟೀರವನ್ನು ರಾಷ್ಟ್ರೀಯ ಸ್ವಯಸೇವಕ ಸಂಘ ಮಂಗಳೂರು ವಿಭಾಗ ಮಾನ್ಯ ಸಂಘ ಚಾಲಕರು ಡಾ. ನಾರಾಯಣ ಶೆಣೈ ಭಾರತಾಂಬೆಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಕಳ ಕಮಲಾಕ್ಷ ಕಾಮತ್ ಶಿಶುಮಂದಿರದ ಬಳಿ ಪ್ರತಿಷ್ಠಾಪಿಸಿದ ಸರಸ್ವತಿ ವಿಗ್ರಹವನ್ನು ಅನಾವರಣ ಮಾಡಿದರು. ಶಿಶುಮಂದಿರದ ಪುಟಾಣಿಗಳಿಗೆ ಆರತಿ ಬೆಳಗಿ ತಿಲಕ ಇಟ್ಟು ಸಿಹಿ ನೀಡಲಾಯಿತು ವಿಧ್ಯಾರ್ಥಿಗಳು ಶಿಶುಮಂದಿರದ ನೂತನ ಕುಟೀರದ ಹೊಸ್ತಿಲಿಗೆ ನಮಸ್ಕಾರ ಮಾಡಿ ಒಳಗೆ ಪ್ರವೇಶ ಮಾಡಿದರು. ನಂತರ ಎಮ್.ಆರ್.ಪಿ.ಎಲ್ ನ ಸಿಎಸ್ಆರ್ ಮೂಲಕ ನಿರ್ಮಿಸಲಾದ 4 ಕೊಠಡಿಗಳ ನೂತನ ಕಟ್ಟಡವನ್ನು ಎಮ್.ಆರ್.ಪಿ.ಎಲ್ ನ ಹಿರಿಯ ಅಧಿಕಾರಿ ಪ್ರದೀಪ್ ಉದ್ಘಾಟಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಸಭಕಾರ್ಯಕ್ರಮ ನಡೆಯಿತು,

ವೇದಿಕೆಯಲ್ಲಿ ಎಮ್.ಆರ್.ಪಿ.ಎಲ್ ನ ಅಧಿಕಾರಿ ಪ್ರದೀಪ್ ಸೇರಿದಂತೆ ಪ್ರಮುಕ ದಾನಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾರ್ಕಳ ಕಮಲಾಕ್ಷ ಕಾಮತ್, ಡಾ.ರವೀಂದ್ರ ಶೆಟ್ಟಿ ಅಧ್ಯಕ್ಷರು ರಾಜ್ಯ ಕೃಷರ್ ಮಾಲೀಕರ ಸಂಘ ಬಜಗೋಳಿ, ಶಾಲಾ ಆಡಳಿತ ಮಂಡಳಿ ಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಹಾಗೂ ಅಧ್ಯಕ್ಷರಾದ ರಾಜು ಪೂಜಾರಿ ಉಪಸ್ಥಿತರಿದ್ದರು.

Related posts

ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿ.ಹಿಂ.ಪ. ಬಜರಂಗದಳ ವತಿಯಿಂದ ಉಜಿರೆಯಲ್ಲಿ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ

Suddi Udaya

ಎಸ್.ಡಿ.ಎಂ. ಬಿ.ಎಡ್., ಮತ್ತು ಡಿ.ಎಡ್. ಕಾಲೇಜು ಹಾಗೂ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜುಗಳ ಜಂಟಿ ಆಶ್ರಯದಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ದ.ಕ.ಜಿಲ್ಲೆಯ ಕಡಲ ತೀರದ ಕೊರೆತವನ್ನು ತಡೆಗಟ್ಟಲು ಶಾಶ್ವತವಾಗಿ ಪರಿಹಾರ ರೂಪಿಸಿ – ವಿಧಾನಪರಿಷತ್ತಿನಲ್ಲಿ ಎಂಎಲ್ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ದ್ವಿತೀಯ ಪಿಯುಸಿ ಪರೀಕ್ಷೆ: ಬೆಳ್ತಂಗಡಿ ಮಾಸ್ಟರ್‍ಸ್ ಕೋಚಿಂಗ್ ಕ್ಲಾಸ್ ಶೇ 88.5 ಫಲಿತಾಂಶ

Suddi Udaya

ತ್ರೋಬಾಲ್ ಪಂದ್ಯಾಟ: ಕರಂಬಾರು ಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ನಾವೂರು ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya
error: Content is protected !!