22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೇರುಕಟ್ಟೆಯಲ್ಲಿ ತಡರಾತ್ರಿ ತ್ಯಾಜ್ಯ ಎಸೆದವನಿಗೆ ಬಿತ್ತು ದಂಡ: ಪಂ.ಸದಸ್ಯರ, ಅಭಿವೃದ್ಧಿ ಅಧಿಕಾರಿ ಮತ್ತು ಮಾಜಿ ಅಧ್ಯಕ್ಷರ ತಡರಾತ್ರಿ ಕಾರ್ಯಾಚರಣೆ

ಬೆಳ್ತಂಗಡಿ : ಕಳಿಯ ಗ್ರಾಮ ಪಂಚಾಯತ್ ನ ಗೇರುಕಟ್ಟೆ ಪೇಟೆಯ ರಸ್ತೆ ಬದಿಯ ಎಲ್ಲೆಂದರಲ್ಲಿ ರಾತ್ರಿ ತ್ಯಾಜ್ಯ ತಂದು ಹಾಕುತ್ತಿದ್ದರು.

ಗ್ರಾಮಸ್ಥರಿಗೆ ಇದರಿಂದ ತುಂಬಾ ತೊಂದರೆ ಆಗುತ್ತಿದ್ದು, ಪಂಚಾಯತ್ ನ ವಾರ್ಡ್ ಸಭೆ ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇತ್ತೀಚಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಹಾಕಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಿ 2 ದಿನಗಳಿಗೆ ಮೊದಲು ಸಿ.ಸಿ.ಟಿ.ವಿ ಅಳವಡಿಸಿ ದಂಡ ಹಾಕುವ ಫಲಕ ಹಾಕಿದ್ದರು.

ನಿನ್ನೆ ತಡರಾತ್ರಿ ಬೇರೆ ಗ್ರಾಮದ ಹೋಟೆಲ್ ಒಂದರಿಂದ ತಾಜ್ಯ ತಂದು ಬಿಸಾಡಲು ಬಂದಾಗ ತಡರಾತ್ರಿ ಪಿ ಡಿ ಓ ಸಿಸಿಟಿವಿ ನೋಡುತ್ತಿದ್ದರು ಅದಾಗಲೇ ನಾಳಕ್ಕೆ ರಸ್ತೆಯಾಗಿ ಹೋಗುತ್ತಿದ್ದ ಪಂ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ನೋಡಿ ತ್ಯಾಜ್ಯ ಹಾಕುತ್ತಿದ್ದವನನ್ನು ದ್ವಿಚಕ್ರ ವಾಹನ ಸಮೇತ ಹಿಡಿದಿಟ್ಟು ಸದಸ್ಯರ ಗಮನಕ್ಕೆ ತಂದರು. ತಡರಾತ್ರಿ ತಕ್ಷಣ ಪಿ ಡಿ ಓ, ಪಂಚಾಯತ್ ಸದಸ್ಯರಾದ ಲತೀಪ್ ಪರಿಮರವರು ಇನ್ನೋರ್ವ ಸದಸ್ಯರಾದ ಅಬ್ದುಲ್ ಕರೀಮ್ ಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಹಾಗೂ ಮಾಜಿ ಪಂ ಅಧ್ಯಕ್ಷರು ಹಿಡಿದು ನಿಲ್ಲಿಸಿ ತಾಜ್ಯ ಬಿಸಾಡಲು ಬಂದವರಿಗೆ ಸ್ಥಳದಲ್ಲಿಯೇ ಮೂರು ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಲಾಯಿತು.

Related posts

ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಲೋ ಅಸ್ಸಿಸ್ಟೆಂನ್ಸ್ ವಿಸಿಟ್( LAV) ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಪತ್ತನಾಜೆ: ಉತ್ಸವಗಳ ಸಮಾಪನ

Suddi Udaya

ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಸಮೃದ್ದ್ ನಿಟ್ಟಡೆ ತೇರ್ಗಡೆ

Suddi Udaya

ಅರಸಿನಮಕ್ಕಿ, ಶಿಶಿಲ ಶೌರ್ಯ ವಿಪತ್ತು ನಿರ್ವಹಣಾ ತಂಡದ ವತಿಯಿಂದ ಮಾದರಿ ಕಾರ್ಯ

Suddi Udaya

ಕನ್ಯಾಡಿ ಸೇವಾಧಾಮಕ್ಕೆ ಬೆಂಗಳೂರಿನ ಕೆಮ್ ಟ್ರೆಂಡ್ ಕಂಪೆನಿಯಿಂದ ಭೇಟಿ

Suddi Udaya

ಮಿತ್ತಬಾಗಿಲು : ಪೆರ್ದಾಡಿಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ

Suddi Udaya
error: Content is protected !!