ಉಜಿರೆ : ಶ್ರೀ.ಧ.ಮಂ ಆಂ.ಮಾ. ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya

ಉಜಿರೆ : ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆಯಲ್ಲಿ ಜೂನ್.15 ರಂದು ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ ನಡೆಯಿತು.

ಶಾಲಾ ವಿದ್ಯಾರ್ಥಿಗಳು ಶಾಲಾ ನಾಯಕನಾಗಿ ಪ್ರಾಂಜಲ್ ಡಿ ಶೆಟ್ಟಿ ಹಾಗೂ ಶಾಲಾ ಉಪ ನಾಯಕನಾಗಿ ಸಿಯೋನ್ ರಾಜ್ ಇವರನ್ನು ಆಯ್ಕೆ ಮಾಡಿರುತ್ತಾರೆ.
ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ಕುನಾರ್, ನೀರಾವರಿ ಮಂತ್ರಿ ಮಾನ್ಯ, ಸಾಂಸ್ಕೃತಿಕ ಮಂತ್ರಿ ಶ್ರೀಮ, ಆರೋಗ್ಯ ಮಂತ್ರಿ ಚಂಪಾ, ಕ್ರೀಡಾ ಮಂತ್ರಿ ರೊಹಾನಿ, ಶಿಸ್ತು ಮಂತ್ರಿಯಾಗಿ ಸನ್ವಿತ್ ಇವರನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿರುತ್ತಾರೆ ಹಾಗೂ ಆಯ್ಕೆಗೊಂಡ ವಿದ್ಯಾರ್ಥಿ ಪರಿಷತ್ತಿನ ನಾಯಕರನ್ನು ಶಿಕ್ಷಕ ವೃಂದದವರು ಅಭಿನಂದಿಸಿದರು.

ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಶಾಲಾ ಸಂಸತ್ತು ಸಂಯೋಜಕರಾದ ಸವಿತಾ ಮತ್ತು ಗಣೇಶ್ ಚುನಾವಣೆಯ ಜವಾಬ್ದಾರಿ ವಹಿಸಿದ್ದರು.

Leave a Comment

error: Content is protected !!