July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

“ದಸ್ಕತ್” ಚಲನಚಿತ್ರಕ್ಕೆ RED FM ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಹಲವು ಪ್ರಶಸ್ತಿ

ಬೆಳ್ತಂಗಡಿ: ತುಳು ಭಾಷೆಯಲ್ಲಿ ತೆರೆಕಂಡು ಮೊದಲ ಪ್ಯಾನ್ ಇಂಡಿಯಾ ಮೂವಿ ಎಂದು ಹೆಗ್ಗಳಿಕೆ ಪಡೆದ ದಸ್ಕತ್ ಚಲನಚಿತ್ರಕ್ಕೆ RED FM ಪ್ರಸ್ತುತ ಪಡಿಸುವ ತುಳು ಫಿಲ್ಮ್ ಅವಾರ್ಡ್ಸ್‌ನಲ್ಲಿ ಒಟ್ಟು ಐದು ಪ್ರಶಸ್ತಿಗಳು ಲಭಿಸಿದೆ.
ಎರಡು ವರ್ಷಗಳ ತುಳು ಚಲನಚಿತ್ರಗಳನ್ನು ಸ್ಪರ್ಧೆಯಲ್ಲಿ ಒಳಪಡಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.

ಉತ್ತಮ ಚಲನಚಿತ್ರ ದಸ್ಕತ್
ಉತ್ತಮ ನಿರ್ದೇಶಕ – ಅನೀಶ್ ಪೂಜಾರಿ ವೇಣೂರು
ಉತ್ತಮ ನಾಯಕ ನಟ-ದೀಕ್ಷಿತ್ ಕೆ ಅಂಡಿಂಜೆ
ಉತ್ತಮ ಖಳ ನಟ- ಯುವ ಶೆಟ್ಟಿ
ಉತ್ತಮ ಪೋಷಕ ನಟ-ಮೋಹನ್ ಶೇಣಿ

ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆ ದಸ್ಕತ್ ಚಲನಚಿತ್ರಕ್ಕಿದ್ದು, ವಿದೇಶದಲ್ಲೂ ಜನಮಾನಸ ಗೆದ್ದು, ಇತ್ತೀಚೆಗೆ ಕನ್ನಡ ಭಾಷೆಯಲ್ಲೂ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ರಾಘವೇಂದ್ರ ಕುಡ್ವ ರವರು ಚಿತ್ರವನ್ನು ನಿರ್ಮಾಣ ಮಾಡಿದ್ದು, ತುಳುವಿನ ದಸ್ಕತ್ ಇಂತಹ ಅಭೂತಪೂರ್ವ ಯಶಸ್ಸು ಕಂಡದ್ದು ಹೆಮ್ಮೆಯ ಸಂಗತಿ.

Related posts

ಜೂ.14: ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ

Suddi Udaya

22ನೇ ಮಹಿಳಾ ಆಲ್ ಇಂಡಿಯಾ ಇಂಟರ್ ಝೋನಲ್ ನೆಟ್ಬಾಲ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ 2 ಕ್ರೀಡಾಪಟುಗಳಿಗೆ ಬೆಳ್ಳಿ ಪದಕ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನ ಮಂತ್ರಿಮಂಡಲ ಪ್ರಮಾಣವಚನ ಸಮಾರಂಭ

Suddi Udaya

ಬ್ರಹ್ಮ ಕ್ಷೇತ್ರ ದೇವರ ಸನ್ನಿದಾನ ಮುಗುಳಿ ಬಸದಿಯಲ್ಲಿ ಸ್ವಚ್ಛತಾ ಶ್ರಮದಾನ

Suddi Udaya
error: Content is protected !!