July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

ಬೆಳ್ತಂಗಡಿ; ಕಳಸದ ಅಂಬಾ ತೀರ್ಥ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಮಧ್ಯಪ್ರದೇಶ ಮೂಲದ ಸಾಗರ್ (19 ) ಯುವಕ ನದಿ ನೀರಿನಲ್ಲಿ ಕಣ್ಮರೆಯಾಗಿದ್ದ ವಿಷಯ ತಿಳಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು ಮೆಚ್ಚುಗೆಯ ಕೆಲಸ ಮಾಡಿದ್ದಾರೆ.

ಈಶ್ವರ್ ಮಲ್ಪೆ ಯವರ ಮೂಲಕ ತಮ್ಮ ತಂಡದ ಕ್ಯಾಪ್ಟನ್ ಸಂತೋಷ್ ಅವರಿಗೆ ಬಂದಿದ್ದ ಕರೆಗೆ ಸ್ಪಂದಿಸಿದ ತಂಡ ತಕ್ಷಣ ಮೃತದೇಹ ಶೋಧ ಕಾರ್ಯಕ್ಕೆ ಉಜಿರೆ-ಬೆಳಾಲು ಘಟಕ ಮುಂದಾಯಿತು. ಘಟಕ ಪ್ರತಿನಿಧಿ ರವೀಂದ್ರ, ಕ್ಯಾಪ್ಟನ್ ಸಂತೋಷ್, ಸಂದೇಶ್, ಸುಧೀರ್ ರವರು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹ ಪತ್ತೆಗಾಗಿ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ಶ್ರಮಿಸಿ ಕೊನೆಗೆ ಯಶಸ್ವಿಯಾಯಿತು.. ಈ ವೇಳೆ ಗ್ರಾ. ಯೋಜನೆಯ ಕಳಸದ ಯೋಜನಾಧಿಕಾರಿ ಹಾಗೂ ಕಳಸದ ಶೌರ್ಯ ಟೀಮ್ ಪೂರಕ ಸಹಕಾರ ನೀಡಿದರು.

Related posts

ಗುರಿಪಳ್ಳದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Suddi Udaya

ಆರಂಬೋಡಿ: ಕುಂಟಾಲ ಪಲ್ಕೆ ಯುವತಿ ನಾಪತ್ತೆ

Suddi Udaya

ಬಂದಾರು : ಪೆರ್ಲ -ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ. ಅ. ಹಿ. ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ನಲ್ಲಿ ಭಾರತೀಯ ಜೈನ್ ಮಿಲನ್ ಸಭೆ

Suddi Udaya
error: Content is protected !!