April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡುಮಲೆ ಪರವನ್ ಕುಟುಂಬಸ್ಥರ ವಾರ್ಷಿಕ ತಂಬಿಲ ಹಾಗೂ ಸನ್ಮಾನ

ಪಡುಮಲೆ: ತುಳುನಾಡಿನ ಸತ್ಯೋದ ಸೀಮೆಯೆಂದು ಹೆಸರು ಪಡೆದಿರುವ ಕುಂಬ್ಳೆ ಸೀಮೆಯಾದ್ಯಂತ ದ್ಯೆವ ನರ್ತನ ಸೇವೆ ಮಾಡುತ್ತಿರುವ ಪಡುಮಲೆ ಪರವನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ವಾರ್ಷಿಕ ತಂಬಿಲ ಜೂ.16 ರಂದು ರಾತ್ರಿ ನಡೆಯಿತು. ಊರ ಪರವೂರಿನಲ್ಲಿರುವ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ದ್ಯೆವ ನರ್ತಕ ಡಾ.ರವೀಶ್ ಪಡುಮಲೆ ಯವರನ್ನು ವಿಶ್ವನಾಥ ಪಡುಮಲೆಯವರು ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಶ್ ಪಡುಮಲೆ ಯವರು ನಾವೆಲ್ಲರೂ ನಮ್ಮ ಹಿರಿಯರಿಂದ ಬಂದ ದ್ಯೆವ ನರ್ತನ ಸೇವೆಯನ್ನು ನಿಷ್ಟೆಯಲ್ಲಿ, ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಮೂಲ ಕಟ್ಟು ಕಟ್ಟಳೆಯನ್ನು ಉಳಿಸೋಣ ಎಂದು ವಿನಂತಿಸಿಕೊಂಡರು. ಉಪನ್ಯಾಸಕ ಜಗನ್ನಾಥ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪೂವಪ್ಪ ಕೊಂಬಾರು, ಶೇಖರ ವಿಟ್ಲ, ಚೆನ್ನಪ್ಪ ಇಚಿಲಂಪಾಡಿ, ಸುಬ್ಬ ನೆಟ್ಟಣ, ವಾಸು ಪಡುಮಲೆ, ನಾಗಪ್ಪ ಕೊಣಾಜೆ, ಜಿನಪ್ಪ ಮರಕಡ, ಶೀನ ಇಚಿಲಂಪಾಡಿ, ಕೊರಗಪ್ಪ ನರಿಮೊಗೆರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಜಯ; ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಕಳೆಂಜ ರಾಜೇಶ್ ಎಂ.ಕೆ ರವರ ಪೋಕ್ಸೋ ಪ್ರಕರಣ: ಅಪ್ರಾಪ್ತ ವಯಸ್ಕಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಕಾನೂನು ವ್ಯವಸ್ಥೆಯ ದುರ್ಬಳಕೆ ಮಾಡಿದ ಬಗ್ಗೆ ಮಂಗಳೂರು ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಕಳೆಂಜ ಗ್ರಾಮಸ್ಥರಿಂದ ಮನವಿ

Suddi Udaya

ಇಂದಿನಿಂದ ಬೆಳ್ತಂಗಡಿಯಲ್ಲಿ ಭಾರಿ ರಿಯಾಯಿತಿಯಲ್ಲಿ ಬಟ್ಟೆಗಳ ಮಾರಾಟ

Suddi Udaya

ಡಿ.18: ತೋಟತ್ತಾಡಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ

Suddi Udaya
error: Content is protected !!