July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಡುಮಲೆ ಪರವನ್ ಕುಟುಂಬಸ್ಥರ ವಾರ್ಷಿಕ ತಂಬಿಲ ಹಾಗೂ ಸನ್ಮಾನ

ಪಡುಮಲೆ: ತುಳುನಾಡಿನ ಸತ್ಯೋದ ಸೀಮೆಯೆಂದು ಹೆಸರು ಪಡೆದಿರುವ ಕುಂಬ್ಳೆ ಸೀಮೆಯಾದ್ಯಂತ ದ್ಯೆವ ನರ್ತನ ಸೇವೆ ಮಾಡುತ್ತಿರುವ ಪಡುಮಲೆ ಪರವನ್ ಕುಟುಂಬಸ್ಥರ ತರವಾಡು ಮನೆಯಲ್ಲಿ ವಾರ್ಷಿಕ ತಂಬಿಲ ಜೂ.16 ರಂದು ರಾತ್ರಿ ನಡೆಯಿತು. ಊರ ಪರವೂರಿನಲ್ಲಿರುವ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಾದ ದ್ಯೆವ ನರ್ತಕ ಡಾ.ರವೀಶ್ ಪಡುಮಲೆ ಯವರನ್ನು ವಿಶ್ವನಾಥ ಪಡುಮಲೆಯವರು ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಶ್ ಪಡುಮಲೆ ಯವರು ನಾವೆಲ್ಲರೂ ನಮ್ಮ ಹಿರಿಯರಿಂದ ಬಂದ ದ್ಯೆವ ನರ್ತನ ಸೇವೆಯನ್ನು ನಿಷ್ಟೆಯಲ್ಲಿ, ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಮೂಲ ಕಟ್ಟು ಕಟ್ಟಳೆಯನ್ನು ಉಳಿಸೋಣ ಎಂದು ವಿನಂತಿಸಿಕೊಂಡರು. ಉಪನ್ಯಾಸಕ ಜಗನ್ನಾಥ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪೂವಪ್ಪ ಕೊಂಬಾರು, ಶೇಖರ ವಿಟ್ಲ, ಚೆನ್ನಪ್ಪ ಇಚಿಲಂಪಾಡಿ, ಸುಬ್ಬ ನೆಟ್ಟಣ, ವಾಸು ಪಡುಮಲೆ, ನಾಗಪ್ಪ ಕೊಣಾಜೆ, ಜಿನಪ್ಪ ಮರಕಡ, ಶೀನ ಇಚಿಲಂಪಾಡಿ, ಕೊರಗಪ್ಪ ನರಿಮೊಗೆರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

Related posts

ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಥಮ್ ರವರಿಗೆ ರಾಜ್ಯ ಸರಕಾರಿ ನೌಕರರ ಸಹಕಾರಿ ಸಂಘದಿಂದ ಅಭಿನಂದನೆ

Suddi Udaya

ಮೈರಲ್ಕೆ ಓಡಿಲ್ನಾಳ: ಶ್ರೀ ಕಿರಾತಮೂರ್ತಿ ಮಹಾಲಿಂಗೇಶ್ವರ ಬ್ರಹ್ಮಕಲಶ ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಅಖಿಲ ಭಾರತ ವೃತ್ತಿ ಪರೀಕ್ಷೆ : ಎಸ್.ಡಿ.ಎಂ. ಮಹಿಳಾ ಐ.ಟಿ.ಐ.ಗೆ ಶೇ. 98 ಫಲಿತಾಂಶ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯು ಶೇಪ್ ವಾಕರ್ ವಿತರಣೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!