ಪುಂಜಾಲಕಟ್ಟೆ : ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಪುಂಜಾಲಕಟ್ಟೆ : ನೂತನ ಭರತ ನಾಟ್ಯ ತರಗತಿ ಉದ್ಘಾಟನಾ ಸಮಾರಂಭವು ಜೂ. 16 ರಂದು ಮುರುಘೇಂದ್ರ ಮಿತ್ರ ಮಂಡಳಿ ಸಭಾಭವನ ಪುಂಜಾಲಕಟ್ಟೆಯಲ್ಲಿ ಜರಗಿತು.
ನೃತ್ಯ ಗುರುಗಳು ಹಾಗೂ ನಿರ್ದೇಶಕರುಗಳಾದ ವಿದುಷಿ ವಿದ್ಯಾ ಮನೋಜ್ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮುರುಘೇಂದ್ರ ವನಿತಾ ಸಮಾಜ ಅಧ್ಯಕ್ಷ ಪುಷ್ಪಲತಾ ಮೋಹನ್, ಯಕ್ಷ ಧ್ರುವ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ದಿವಾಕರ ದಾಸ್ ಉಪಸ್ಥಿತರಿದ್ದರು.


ಬಂದಂತಹ ಅತಿಥಿ ಗಣ್ಯರನ್ನು ವಿದುಷಿ ಶಾಶ್ವತ ಸ್ವಾಗತಿಸಿ ಸತ್ಕರಿಸಿದರು.

Leave a Comment

error: Content is protected !!