September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿಯ ವಜ್ರ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಗುರುವಾಯನಕೆರೆ, ಸಂತೆಕಟ್ಟೆ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

ಬೆಳ್ತಂಗಡಿ: ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರ ಮಹೋತ್ಸವದ
ಸಂಭ್ರಮಾಚರಣೆ 2024 ಇದರ ಪ್ರಯುಕ್ತ ಜೂ.21 ರಂದು ಗುರುವಾಯನಕೆರೆ, ಸಂತೆಕಟ್ಟೆ ಬೆಳ್ತಂಗಡಿ ಶಾಖೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರುಗಿತು.


ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾದ ದಿವಾಕರ ಆಚಾರ್ಯ, ನಿವೃತ್ತ ಪ್ರಾಂಶುಪಾಲರು ಮೋಹನ್ ದಾಸ್.ಎ ಧಾರ್ಮಿಕ ಚಿಂತಕರು, ಲಾಯಿಲ ಶ್ರೀ ವಿಶ್ವಕರ್ಮಾಭ್ಯುದಯ ಸಭಾ (ರಿ.) ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ , ಮುಖೇಶ್ ಯೋಗೀಶ್ ಆರ್ ನಾಯಕ್ ಕಟ್ಟಡ ಮಾಲಿಕರು, ನಿರ್ದೇಶಕ ಮಂಜುನಾಥ ಆಚಾರ್ಯ , ಶಾಖಾ ವ್ಯವಸ್ಥಾಪಕರು ಪ್ರಶಾಂತ್ ಹೆಚ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ‌ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಪರಿಸರದ‌ ಬಗ್ಗೆ ಮುಖ್ಯ ಅತಿಥಿಯಾದ ದಿವಾಕರ ಆಚಾರ್ಯ ನಿವೃತ್ತ ಪ್ರಾಂಶುಪಾಲರು “ಪರಿಸರವನ್ನು ನಾಶ ಮಾಡಿದರೆ ಕಾಲ ಕಾಲಕ್ಕೆ ಸರಿಯಾದ ಮಳೆ ಬರುವುದಿಲ್ಲ, ಕಾಲ ಕಾಲಕ್ಕೆ ಮರಗಳಲ್ಲಿ ಹಣ್ಣುಗಳು ಇರುವುದಿಲ್ಲ, ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಕಾಣುತ್ತಿದ್ದೇವೆ. ಈಗಿನ ಮಕ್ಕಳು ಗಿಡವನ್ನು ನೆಟ್ಟು ಅದನ್ನು ಪಾಲಿಸಿ ಫೋಷಣೆ ಮಾಡಿ ದೊಡ್ಡ ಮರವನ್ನಾಗಿ ಬೆಳೆಸಬೇಕು”. ಅದರ ಜವಾಬ್ದಾರಿ ನಮಗೆಲ್ಲರಿಗಿರಬೇಕು ಮತ್ತು ಪರಿಸರವನ್ನು ಉಳಿಸಿ ನಾವೆಲ್ಲರು ಕೈ ಜೋಡಿಸೋಣ ಎಂದು ಪರಿಸರದ ಮಹತ್ವನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಸಂಸ್ಥೆ ಬೆಳೆದು ಬಂದ ದಾರಿ, ಅಭಿವೃದ್ಧಿ, ಗ್ರಾಹಕರಿಗೆ ನೀಡುವ ಸವಲತ್ತು ಮತ್ತು ವನಮಹೋತ್ಸವದ ಬಗ್ಗೆ ಮಾತನಾಡಿದರು.

ಮೋಹನ್ ದಾಸ್.ಎ. ಧಾರ್ಮಿಕ ಚಿಂತಕರು ಇವರು “ಒಂದು ಉತ್ತಮವಾದ ಕಾರ್ಯಕ್ರಮವೆಂದರೆ ವನಮಹೋತ್ಸವ” ಎಂದು ತಿಳಿಸಿದರು.

ಲಾಯಿಲ ವಿಶ್ವಕರ್ಮಾಭ್ಯುದಯ ಸಭಾ (ರಿ.) ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಪರಿಸರದ ಬಗ್ಗೆ “ಮರವನ್ನು ನೆಡುವುದು ಮಾತ್ರವಲ್ಲ ಅದಕ್ಕೆ ಬೇಸಿಗೆ ಕಾಲದಲ್ಲಿ ನೀರನ್ನು ಹಾಕಿ ಸಂರಕ್ಷಿಸಬೇಕೆಂದು” ತಿಳಿಸಿದರು.

ನಿರ್ದೇಶಕ ಮಂಜುನಾಥ ಆಚಾರ್ಯ ವನಮಹೋತ್ಸವದ ಬಗ್ಗೆ ಹಿತನುಡಿಗಳನ್ನು ನುಡಿದರು.

ಕಾರ್ಯಕ್ರಮದ‌ಲ್ಲಿ ಜನತಾ ನಿಧಿ ಸಂಗ್ರಾಹಕರು, ಚಿನ್ನಾಭರಣ ಮೌಲ್ಯಮಾಪಕರು, ಠೇವಣಿದಾರರು ಹಾಗೂ ಸದಸ್ಯ ಗ್ರಾಹಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಸದಸ್ಯೆ ಕುಮಾರಿ ರಕ್ಷಿತಾ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಂಸ್ಥೆಯ ಸಿಬ್ಬಂದಿ ಸುಶಾಂತ ಆಚಾರ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಶಾಖಾ ವ್ಯವಸ್ಥಾಪಕ ಪ್ರಶಾಂತ್ ಹೆಚ್ ಆಚಾರ್ಯ ಸಮಾರಂಭಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಸಿಬ್ಬಂದಿ ಗುರುಪ್ರಸಾದ್ ಧನ್ಯವಾದವಿತ್ತರು.

Related posts

ಶಾಸಕ ಪೂಂಜರ ಕಚೇರಿ ಶ್ರಮಿಕಕ್ಕೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ

Suddi Udaya

ಬೆಳಾಲು: ಅನoತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಾವು–ಕೌಕ್ರಾಡಿ ತ್ರಿಗುಣಾತ್ಮಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ: ರೂ.8 ಲಕ್ಷ ವೆಚ್ಚದ ಮಹಾದ್ವಾರ ಉದ್ಘಾಟನೆ

Suddi Udaya

ಎಕ್ಸೆಲ್ ಪುಟಾಣಿಗಳ ” ನಡೆ ಪ್ರಕೃತಿಯ ಕಡೆ” ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಂ| ಸಿ| ಟೆಸಿ ಮಾನುವೆಲ್ ಎಸ್ ಎಚ್ ರವರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

Suddi Udaya

ನೆರಿಯದ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya
error: Content is protected !!