ಕುಂಟಿನಿ ಬೂತ್ ಸಮಿತಿ ಎಸ್.ಡಿ.ಪಿ.ಐ ವತಿಯಿಂದ ಪಕ್ಷದ ಸಂಸ್ಥಾಪನ ದಿನಾಚರಣೆ

Suddi Udaya

ಲಾಯಿಲ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ , ಕುಂಟಿನಿ ಬೂತ್ ಸಮಿತಿ ವತಿಯಿಂದ ಪಕ್ಷದ 16ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ “ದ್ವಜಾರೋಹಣ ಕಾರ್ಯಕ್ರಮ”ವು *ಟಿ ಬಿ ಕ್ರಾಸ್ ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೌಫ್ ನೀರ್ಸಲ್ “ಅಧ್ಯಕ್ಷರು ಎಸ್.ಡಿ.ಪಿ.ಐ ಕುಂಟಿನಿ ಬೂತ್ ಸಮಿತಿ ವಹಿಸಿದ್ದರು.
ಎಸ್.ಡಿ.ಪಿ.ಐ ಉಜಿರೆ ಬ್ಲಾಕ್ ಕಾರ್ಯದರ್ಶಿ ಮರ್ಷಾದ್ ಉಜಿರೆ ಹಾಗೂ ರೌಫ್ ನೀರ್ಸಲ್ ದ್ವಜಾರೋಹಣ ನೆರವೇರಿಸಿದರು.
ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ನಿಝಮ್ ಗೇರುಕಟ್ಟೆ ಕಾರ್ಯಕ್ರಮವನ್ನು ಉದ್ದೇಶಿಸಿ ಸಂದೇಶ ಬಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮಿತಿ ಜೊತೆಕಾರ್ಯದಶಿ ಫಝಲ್ ರೆಹಮನ್ ಕೋಯಾ, ಪಂಚಾಯತ್ ಸದಸ್ಯ ಸಲೀಂ ಕುಂಟಿನಿ, ಶಮ ಮುಹಮ್ಮದಲಿ, ಹಾಗೂ ಅಲ್ ಬುಖಾರಿ ಜುಮ್ಮಾ ಮಸ್ಜಿದ್ ಕುಂಟಿನಿ ಅಧ್ಯಕ್ಷ ಇಸ್ಮಾಯಿಲ್ ಸನಾ, ಹಾಗೂ ಮಾಜಿ ಕಾರ್ಯದರ್ಶಿ ಯೂಸುಫ್ ಬಾಬಾ ಉಪಸ್ಥಿತರಿದ್ದರು.
ಸಹಲ್ ನೀರ್ಸಲ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!